ಶಾಸಕರ ಕಚ್ಚಾಟ; ನಾಯಿ ಜೊತೆ ವಾಟಾಳ್ ಹಾರಾಟ

Vatal Nagaraj
ಬೆಂಗಳೂರು, ಜು.11: ವಾಟಾಳ್ ನಾಗರಾಜ್ ಅವರು ತಮ್ಮ ಪ್ರತಿಭಟನೆ ಸೂಕ್ತ ಪ್ರಾಣಿಗಳನ್ನು ಆಯ್ಕೆ ಮಾಡುವಲ್ಲಿ ಸಫಲರಾಗುತ್ತಾ ಸದಾ ಸುದ್ದಿಯಲ್ಲಿರುತ್ತಾರೆ. ಪ್ರಾಣಿ ದಯಾ ಸಂಘದವರ ಕೆಂಗಣ್ಣಿಗೆ ಇನ್ನೂ ವಾಟಾಳ್ ಸಿಕ್ಕಿಲ್ಲ ಯಾಕೆ ಎಂಬುದೇ ಯಕ್ಷ ಪ್ರಶ್ನೆ.

ಅದಿರಲಿ, ಇಂದು ಫಾರಿನ್ ತಳಿಯ ನಾಲ್ಕಾರು ನಾಯಿಗಳನ್ನು ಒಟ್ಟುಗೂಡಿಸಿಕೊಂಡು ಮಹಾತ್ಮಾ ಗಾಂಧೀ ಪ್ರತಿಮೆ ಎದುರು ಧರಣಿ ಕೂತು ವಾಟಾಳ್ ಅವರನ್ನು ಏನು ವಿಷಯ ಎಂದು ಕೇಳಿದರೆ, ಸದನದಲ್ಲಿ ಶಾಸಕರು ಕಚ್ಚಾಟಕ್ಕೆ ಪ್ರತಿಭಟನೆ ಎಂದರು.

ರಚನಾತ್ಮಕವಾದ ಚರ್ಚೆಯ ತಾಣವಾಗಬೇಕಿದ್ದ ವಿಧಾನಸಭೆಯನ್ನು ಕುಸ್ತಿ ಅಖಾಡ ಮಾಡಿಕೊಂಡಿರುವ ಶಾಸಕರುಗಳಿಗೆ ಧಿಕ್ಕಾರ. ಇದು ಪ್ರಜಾಪ್ರಭುತ್ವದ ದುರಂತ.ಶಾಸಕರ ಕಚ್ಚಾಟವನ್ನು ಸಭಾಪತಿಗಳು ಹಗುರವಾಗಿ ಪರಿಗಣಿಸದೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಟಾಳ್ ಆಗ್ರಹಿಸಿದರು.

ಸಭೆಯನ್ನು ನಿಯಂತ್ರಿಸಲಾಗದೆ, ತನ್ನ ಸಹಚರರನ್ನು ಹದ್ದುಬಸ್ತಿನಲ್ಲಿಡದ ಮುಖ್ಯಮಂತ್ರಿ ಯಡಿಯೂರಪ್ಪ, ಅತ್ಯಂತ ಕಳಪೆ ಹಾಗೂ ದುರ್ಬಲ ಎಂದು ಸಾಬೀತಾಗಿದೆ. ಆ ವ್ಯಕ್ತಿಗೆ ಆತ್ಮಗೌರವ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಾಟಾಳ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+