ಕಾಂಗ್ರೆಸ್ಸಿಗರೆ ನನ್ನ ಬಳಿ ಬರಬೇಡಿ : ರಾಜ್ಯಪಾಲ

ನಾನು ರಾಷ್ಟ್ರಪತಿಗಳ ಪ್ರತಿನಿಧಿಯೇ ಹೊರತು ರಾಜಕೀಯ ಪಕ್ಷಗಳ ಪ್ರತಿನಿಧಿಯಲ್ಲ. ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿದ್ದರೆ ಅದರ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ನಡೆಸಬೇಕು. ಆದರೆ, ಯಾವ ಕಾರಣಕ್ಕೂ ನನ್ನ ಬಳಿ ಬರಬೇಡಿ ಎಂದು ವಿರೋಧ ಪಕ್ಷದ ಮುಖಂಡರಿಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ರಾಜ್ಯದ ಸಂಪತ್ತು ಲೂಟಿ ಆಗುತ್ತಿರುವುದನ್ನು ಮೂಕಪ್ರೇಕ್ಷಕನಂತೆ ನೋಡಲಾರೆ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ರಾಜ್ಯಪಾಲರು ವಿವರಿಸಿದರು.
ಬಿಜೆಪಿ ಸರಕಾರ ಅಧಿಕಾರ ಬಂದ ಕಾಂಗ್ರೆಸ್ ಮುಖಂಡರು ಸಣ್ಣಪುಟ್ಟ ಸಮಸ್ಯೆಗಳಿಗೂ ರಾಜಭವನದತ್ತ ಮುಖ ಮಾಡುವುದು ಹೊಸದೇನಲ್ಲ. ಪಟಾಕಿ ಸಿಡಿದರೂ ಬಿಜೆಪಿ ಸರಕಾರದ ಕೈವಾಡ ಎಂದು ರಾಜಭವನಕ್ಕೆ ತೆರೆಳಿ ಮನವಿ ಸಲ್ಲಿಸಿರುವ ಅನೇಕ ಉದಾಹರಣೆಗಳು ಇವೆ.











Click it and Unblock the Notifications