ಹರಿಪ್ರಸಾದ 'ಕೈ'ಗೆ ಕೆಪಿಸಿಸಿ ಕೀಲಿ?

ನಾಯಕತ್ವ ಕೊರತೆ, ಜೆಡಿಎಸ್ ಜೊತೆ ಮೈತ್ರಿ ಹೊಂದಾಣಿಕೆಯ ಗೊಂದಲ, ನೆರೆ ಹಣ ದುರ್ಬಳಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಂಪೂರ್ಣ ಕುಸಿದಿದೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಹರಿಪ್ರಸಾದ ಅವರನ್ನು ರಾಜ್ಯಕ್ಕೆ ಕಳಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇತ್ತೀಚೆಗೆ ವಿಧಾನಸಭೆಯಿಂದ ರಾಜ್ಯ ಸಭೆಗೆ ನಡೆದ ಚುನಾವಣೆಯಲ್ಲಿ ಹರಿಪ್ರಸಾದ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ, ಈ ನಿರ್ಧಾರಕ್ಕೆ ಜೆಡಿಎಸ್ ನಿಂದ ಬಲವಾದ ವಿರೋಧ ವ್ಯಕ್ತವಾಗಿತ್ತು. ಈ ವಿರೋಧವೇ ಹರಪ್ರಸಾದ ಅವರಿಗೆ ವರದಾನವಾಗುವ ಸಾಧ್ಯತೆ ಇದೆ. ಜೆಡಿಎಸ್ ಬಗ್ಗೆ ಮೃದುಧೋರಣೆ ತಾಳಲಾರದೆ ಪಕ್ಷವನ್ನು ಕಟ್ಟುವ ಸಮರ್ಥ ನಾಯಕನನ್ನು ಕಾಂಗ್ರೆಸ್ ಹುಡುತ್ತಿದೆ.











Click it and Unblock the Notifications