ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಣಿಕಂಪೆನಿಯಿಂದ ಬಡವರಿಗೆ ಕ್ಯಾನ್ಸರ್ ಅಸ್ಪತ್ರೆ
ರಾಯ್ ಪುರನಲ್ಲಿ ಬಡವರಿಗಾಗಿ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಸಿದಲು ಅನಿಲ್ ಅಗರವಾಲ್ ಮಾಲೀಕತ್ವದ ಗಣಿ ಸಂಸ್ಥೆ ವೇದಾಂತ ಮುಂದಾಗಿದೆ. ಗಣಿ ಕಂಪೆನಿ ವೇದಾಂತ ಚತ್ತೀಸ್ ಘಡ್ ನ ರಾಯ್ ಪುರದಲ್ಲಿ 350 ಕೋಟಿ ರುಪಾಯಿಗಳ ವೆಚ್ಚದಲ್ಲಿ 360 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಯನ್ನು ನಿರ್ಮಿಸುವುದಾಗಿ ತಿಳಿಸಿದೆ.
50 ಎಕರೆ ವಿಸ್ತೀರ್ಣದ ಈ ಸುಸಜ್ಜಿತ ಆಸ್ಪತ್ರೆಯಲ್ಲಿ 125 ವೈದ್ಯರು ಹಾಗೂ 300 ದಾದಿಯರನ್ನು ನೇಮಕ ಮಾಡಿಕೊಳ್ಳಲಿರುವುದಾಗಿ ಕಂಪೆನಿ ಪ್ರಕಟಿಸಿದ್ದು ನಿರ್ಮಾಣ ಕಾರ್ಯ ಸಾಗಿದ್ದು ಇದಕ್ಕೆ ವೆದಾಂತ ಕ್ಯಾನ್ಸರ್ ಹಾಸ್ಪಿಟಲ್ ಅಂಡ್ ರೀಸರ್ಚ್ ಸೆಂಟರ್ ಎಂದು ಹೆಸರಿಸಲಾಗಿದೆ.
ಮೊದಲ ಹಂತದಲ್ಲಿ ಕಂಪೆನಿ 200 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದ್ದು ನವೆಂಬರ್ 2011ಕ್ಕೆ ನಿರ್ಮಾಣಕಾರ್ಯ ಮುಗಿಯಲಿದ್ದು ಬಡ ವರ್ಗದವರಿಗೆ ಚಿಕಿತ್ಸೆಯಲ್ಲಿ ರಿಯಾಯ್ತಿ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ
Comments
ವೇದಾಂತ ಗಣಿಗಾರಿಕೆ ರೆಡ್ಡಿ ಸೋದರರು ವಾಣಿಜ್ಯ vedanta mining chattisgarh reddy brothers finance news raipur
Story first published: Wednesday, June 30, 2010, 14:00 [IST]