ಆಟೋ ಮೀಟರ್ ದರ 14 ರಿಂದ 18ಕ್ಕೆ ಏರಿಕೆ?

ಬೆಂಗಳೂರಿನ ಪ್ರಮುಖ ಆಟೋ ಸಂಘಟನೆಗಳಾದ ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ, ಬಿಜೆಪಿ ಆಟೋ ಸಂಘ ಮುಂತಾದ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂಕೆ ಆಯ್ಯಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ಐದಾರು ವರ್ಷಗಳಲ್ಲಿ ಬಿಎಂಟಿಸಿ, ಕೆಎಸ್ಆರ್ ಟಿಸಿ ಸಂಸ್ಥೆಗಳು ಪ್ರಯಾಣ ದರವನ್ನು ಹಲವು ಬಾರಿ ಏರಿಸಿವೆ. ಆದರೆ, ಆಟೋ ಪ್ರಯಾಣ ದರ ಏರಿಕೆ ಕಂಡಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಕನಿಷ್ಠ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಆದರ್ಶ ಆಟೋ ಸಂಘ ಹೇಳಿದೆ.
ಆಟೋರಿಕ್ಷಾ ಕಷ್ಟ ನಷ್ಟ ವಿವರಗಳು:
*ಹಳೆ ದರ:ಕನಿಷ್ಠ ಪ್ರಯಾಣದರ ರು.14( ಪ್ರತಿ 2ಕಿ.ಮೀಗೆ) ನಂತರ ಮುಂದಿನ ಹಂತದಲ್ಲಿ ರು.7 ನಂತೆ ಹೆಚ್ಚಳ.
*ಸಂಭವನೀಯ ಹೊಸ ದರ: ರು. 18( ಪ್ರತಿ 2ಕಿ.ಮೀಗೆ) ನಂತರ ಮುಂದಿನ ಹಂತದಲ್ಲಿ ರು.8-9 ನಂತೆ ಹೆಚ್ಚಳ.
*ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀ.ಗೆ 58.09 ರು ಇದ್ದು, ಎರಡು ಸ್ಟ್ರೋಕ್ ಇಂಜಿನ್ ವುಳ್ಳ ಆಟೋ ಪ್ರತಿ ಲೀಟರ್ ಗೆ 25 ಕೀ.ಮೀ ಮೈಲೇಜ್ ಕೊಡುತ್ತದೆ. ನಾಲ್ಕು ಸ್ಟ್ರೋಕ್ ಆದರೆ 30ಕಿ.ಮೀ ಮೈಲೇಜ್ ನಿರೀಕ್ಷಿಸಬಹುದು.
* ಎಲ್ ಪಿಜಿ ಕಿಟ್ ವುಳ್ಳ ಆಟೋರಿಕ್ಷಾಗೆ ಪ್ರತಿ ಕೆಜಿ ಕಿಟ್ ಗೆ ರು.40 ತಗುಲುತ್ತದೆ. ಮೈಲೇಜ್ ಪೆಟ್ರೋಲ್ ಗಾಡಿಗಿಂತ ಐದು ಕಿ.ಮೀ ಅಧಿಕ ಓಡುತ್ತದೆ.
* ಆಟೋಗೆ ಇಂಜಿನ್ ಆಯಿಲ್ ಪ್ರತಿ ಲೀಟರ್ ಗೆ 130 ರು ಆಗಿದೆ. ಇದು ಕೂಡಾ ದುಬಾರಿ ಎನಿಸಿದೆ.
*ಬೆಳಗ್ಗೆ 7 ರಿಂದ ರಾತ್ರಿ 11 ರವರೆಗೆ ಓಡಿಸಿದರೂ ರಾಜಾಜಿನಗರದಂತಹ ಏರಿಯಾದಲ್ಲೇ ಹತ್ತು ಜನ ಪ್ಯಾಸೇಂಜರ್ ಸಿಗುವುದಿಲ್ಲ ಎನ್ನುತ್ತಾರೆ ಆಟೋ ಚಾಲಕ ರಾಜು.
*ಆಟೋ ಪ್ರಯಾಣ ದರ ಏರಿಕೆ ಮಾಡಿದ ಮೇಲೆ ಆಟೋ ಮೀಟರ್ ಪಲ್ಸ್ ಬದಲಿಸಲು ಮೆಕ್ಯಾನಿಕ್ ಗೆ 500 ರು ಹಾಗೂ ಆರ್ ಟಿಒಗೆ 100 ರು ತೆರಬೇಕಾಗುತ್ತದೆ.
* ಮೆಟ್ರೋ ಶುರುವಾದರೆ, ನಮ್ಮನ್ನು ಕೇಳುವವರು ಯಾರು ಸಿಗುವುದಿಲ್ಲ.ಜನ ಸಾಮಾನ್ಯರು ಕಷ್ಟದಲ್ಲಿದ್ದಾರೆ. ಬೆಲೆ ಏರಿಕೆಗೆ ಇದು ಸಮಯವಲ್ಲ ಎನ್ನುತ್ತಾರೆ ಫ್ರೇಜರ್ ಟೌನ್ ನಿವಾಸಿ ಚಾಲಕ ವೇಲು.
ಈಗ ನಿರ್ಧಾರ ಸಾರಿಗೆ ಇಲಾಖೆಯ ಮುಂದಿದ್ದು, ಬಲ್ಲ ಮೂಲಗಳು ಪ್ರಕಾರ ಆಟೋ ಪ್ರಯಾಣದ ಕನಿಷ್ಠ ಮೀಟರ್ ದರವನು 17 ಅಥವಾ 18 ರು ಗಳಿಗೆ ಏರಿಸುವುದು ಗ್ಯಾರಂಟಿ ಎನ್ನಲಾಗಿದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications