ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಕೊಲೆಗೆ ಸುಪಾರಿ ನೀಡಿದ ಕುಲಪುತ್ರ

By Mahesh
|
Google Oneindia Kannada News

ಬೆಂಗಳೂರು, ಜೂ.15:ಸ್ವಂತ ಅಪ್ಪನ ಕೊಲೆಗೆ ಸುಪಾರಿ ನೀಡಿದ್ದ ಅಶೋಕ್ ಎಂಬ ಪುತ್ರರತ್ನನನ್ನು ಹಾಗೂ ಆತನ ಐದು ಜನ ಸಹಚರರನ್ನು ಇಂದು ರಾಮಮೂರ್ತಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಓಎಂಬಿಆರ್ ಲೇಔಟ್ ನ ನಿವಾಸಿಯಾದ ಲ್ಯಾಂಡ್ ಡೆವಲಪರ್ ಶಂಕರಪ್ಪ(50) ಅವರು ನೀಡಿದ ದೂರಿನ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನ ಮಗ ಅಶೋಕ್(28), ಜಯಂತಿ(32),ಮಂಜುಳ(30), ಕಾಂತ(32), ರಾಮು(24) ಮುಂತಾದವರನ್ನು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ : ರಿಯಲ್ ಎಸ್ಟೇಟ್ ಉದ್ಯಮಿ ಶಂಕರಪ್ಪ ಅವರಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಗೆ ಮೂವರು ಹಾಗೂ ಎರಡನೇ ಹೆಂಡತಿಗೆ ಇಬ್ಬರು ಮಕ್ಕಳು. ಇಬ್ಬರು ಪತ್ನಿಯರಿಗೆ ಸ್ವಂತ ಮನೆ ವ್ಯವಸ್ಥೆಯನ್ನು ಶಂಕರಪ್ಪ ಮಾಡಿದ್ದಾರೆ.

ಹಿರಿಯ ಪತ್ನಿಯ ಮಗನಾದ ಆರೋಪಿ ಅಶೋಕ, ತನ್ನ ತಂದೆಯ ಎರಡನೇ ಮದುವೆಗೆ ವಿರೋಧಿಸುತ್ತಾ ಬಂದಿದ್ದ, ನನಗೆ ಹಾಗೂ ನನ್ನ ತಾಯಿಗೆ ಅನ್ಯಾಯವಾಗಿದೆ ಎಂದು ಪರಿಗಣಿಸಿ, 8 ಜನರಿಗೆ 13ಲಕ್ಷ ರು ಸುಪಾರಿ ಕೊಟ್ಟು, ತನ್ನ ತಂದೆ ಶಂಕರಪ್ಪನನ್ನು ಕೊಲೆ ಮಾಡಲು ಹೇಳಿದ್ದ.

ಆದರೆ, ಶಂಕರಪ್ಪ ಅವರ ದೂರು ಸ್ವೀಕರಿಸಿದ ತಕ್ಷಣ ಕಾರ್ಯ ಪ್ರವೃತ್ತರಾದ ಎಸಿಪಿ ಎನ್ ನರಸಿಂಹಯ್ಯ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಅವರ ತಂಡ,ಆರೋಪಿ ಹಾಗೂ ಅವನ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X