ಅಪ್ಪನ ಕೊಲೆಗೆ ಸುಪಾರಿ ನೀಡಿದ ಕುಲಪುತ್ರ
ಓಎಂಬಿಆರ್ ಲೇಔಟ್ ನ ನಿವಾಸಿಯಾದ ಲ್ಯಾಂಡ್ ಡೆವಲಪರ್ ಶಂಕರಪ್ಪ(50) ಅವರು ನೀಡಿದ ದೂರಿನ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನ ಮಗ ಅಶೋಕ್(28), ಜಯಂತಿ(32),ಮಂಜುಳ(30), ಕಾಂತ(32), ರಾಮು(24) ಮುಂತಾದವರನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ : ರಿಯಲ್ ಎಸ್ಟೇಟ್ ಉದ್ಯಮಿ ಶಂಕರಪ್ಪ ಅವರಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಗೆ ಮೂವರು ಹಾಗೂ ಎರಡನೇ ಹೆಂಡತಿಗೆ ಇಬ್ಬರು ಮಕ್ಕಳು. ಇಬ್ಬರು ಪತ್ನಿಯರಿಗೆ ಸ್ವಂತ ಮನೆ ವ್ಯವಸ್ಥೆಯನ್ನು ಶಂಕರಪ್ಪ ಮಾಡಿದ್ದಾರೆ.
ಹಿರಿಯ ಪತ್ನಿಯ ಮಗನಾದ ಆರೋಪಿ ಅಶೋಕ, ತನ್ನ ತಂದೆಯ ಎರಡನೇ ಮದುವೆಗೆ ವಿರೋಧಿಸುತ್ತಾ ಬಂದಿದ್ದ, ನನಗೆ ಹಾಗೂ ನನ್ನ ತಾಯಿಗೆ ಅನ್ಯಾಯವಾಗಿದೆ ಎಂದು ಪರಿಗಣಿಸಿ, 8 ಜನರಿಗೆ 13ಲಕ್ಷ ರು ಸುಪಾರಿ ಕೊಟ್ಟು, ತನ್ನ ತಂದೆ ಶಂಕರಪ್ಪನನ್ನು ಕೊಲೆ ಮಾಡಲು ಹೇಳಿದ್ದ.
ಆದರೆ, ಶಂಕರಪ್ಪ ಅವರ ದೂರು ಸ್ವೀಕರಿಸಿದ ತಕ್ಷಣ ಕಾರ್ಯ ಪ್ರವೃತ್ತರಾದ ಎಸಿಪಿ ಎನ್ ನರಸಿಂಹಯ್ಯ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಅವರ ತಂಡ,ಆರೋಪಿ ಹಾಗೂ ಅವನ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.