ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಂಗಾನದಿಯಲ್ಲಿ ಭೀಕರ ದೋಣಿ ದುರಂತ
ಉತ್ತರ ಪ್ರದೇಶದ ದುಬಾಹರ್ ಪ್ರದೇಶದಲ್ಲಿನ ಈ ದೋಣಿಯಲ್ಲಿ 60ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.ನದಿ ಮಧ್ಯದಲ್ಲಿ ಪ್ರಾರ್ಥನಾ ಕಾರ್ಯಕ್ರಮ ನಡೆಸಲು ತೆರಳಿದ್ದ ತಂಡದವರು ದೋಣಿಯನ್ನು ಒಜಾವಾಲಿಯಾ ಘಾಟ್ ಪ್ರದೇಶದಿಂದಬಾಡಿಗೆಗೆ ಪಡೆದಿದ್ದರು ಎಂದು ಜಿಲ್ಲಾಧಿಕಾರಿ ಸೆಂಥಿಲ್ ಪಾಂಡ್ಯನ್ ತಿಳಿಸಿದ್ದಾರೆ.
ಸಾವಿನ ಸಂಖ್ಯೆ ಸರಿಯಾಗಿ ಪತ್ತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹತ್ತಿಪ್ಪತ್ತು ಮಂದಿ ದೋಣಿಯಿಂದ ಹಾರಿ ಪಾರಾಗಿರುವ ಸಾಧ್ಯತೆಯೂ ಇದೆ. 25 ಜನಕ್ಕೆ ಸ್ಥಳಾವಕಾಶವಿದ್ದ ದೋಣಿಯಲ್ಲಿ ಸುಮಾರು 60 ಜನ ಪ್ರಯಾಣ ಮಾಡಿದ್ದೇ ದುರಂತಕ್ಕೆ ಕಾರಣೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೃತಪಟ್ಟವರಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪಾಂಡ್ಯನ್ ಹೇಳಿದರು.
Comments
Story first published: Monday, June 14, 2010, 15:02 [IST]