ತುಳಸಿ ಬೆಳೆಸಿ ಮನುಕುಲ ಉಳಿಸಿ

ನೈಸ್ ರಸ್ತೆ ದಾಟಿ ಕೊಂಚ ದೂರ ಸಾಗಿ ಬಲಕ್ಕೆ ತಿರುಗಿ ತಾತಗುಣಿಯ ಮೂಲಕ ಸಾಗಿದರೆ ಶ್ರೀ ಸ್ವಾನಂದಾಶ್ರಮದ ಸಿಗುತ್ತದೆ. ಅದರ ಸಮೀಪದಲ್ಲಿ ಶ್ರೀ ಗುರುಕೃಪಾ ಸೇವಾಟ್ರಸ್ಟ್ ನವರ 100x200 ಅಡಿ ನಿವೇಶನದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಹಂಪಿಯ ಶ್ರೀ ಯಂತ್ರೋದ್ಧಾರಕ ಪ್ರಾಣ ದೇವರ ಪ್ರತೀಕ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂರು ಹಂತಗಳ ವಿಶೇಷ ಬೃಂದಾವನದ ಕಟ್ಟಡ ನಿರ್ಮಾಣಕ್ಕಾಗಿ ಶಿಲಾನ್ಯಾಸ 2008 ರ ವಿಜಯದಶಮಿಯಂದು ಉಡುಪಿಯ ಪೇಜಾವರ ಮಠದ ಪರಮ ಪೂಜ್ಯ ಶ್ರೀ ವಿಶ್ವೇಶತೀರ್ಥಶ್ರೀಪಾದಂಗಳವರ ಕೃಪಾಶೀರ್ವಾದದಿಂದ ನೆರವೇರಿತು.
"ತುಳಸಿ ಬೆಳಸಿ, ಮನುಕುಲ ಉಳಿಸಿ" ಎಂಬ ಧ್ಯೇಯವಾಕ್ಯದೊಂದಿಗೆ ಧಾರ್ಮಿಕವಾಗಿ ವೈಜ್ಞಾನಿಕವಾಗಿ ತುಳಸಿಯ ಮಹತ್ವ ತಿಳಿಸುತ್ತಾ ಮಠದ ಆವರಣದಲ್ಲಿ, ಮಳೆ ನೀರು ಕೊಯ್ಲು ತಂತ್ರಜ್ಞಾನದ ಮೂಲಕ ತುಳಸಿ ಸಸಿಗಳನ್ನು ಬೆಳೆಸಿ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಶಾಲಾ ಆವರಣ, ದೇವಾಲಯ ಇತ್ಯಾದಿಗಳ ಮುಂದೆ ಉಚಿತವಾಗಿ ವಿತರಿಸುತ್ತಿದ್ದಾರೆ. ಪ್ರತಿ ಮನೆಯ ಮುಂದೆ ಸಂಸ್ಕೃತಿಯ ಪ್ರತೀಕವಾಗಿ ಕಂಗೊಳಿಸುತ್ತಿರುವ ತುಳಸಿ ಮುಖ್ಯವಾಗಿ ನಗರಗಳಲ್ಲಿ ಕಣ್ಮರೆಯಾಗುತ್ತಿರುವ ಹಿನ್ನಲೆಯಲ್ಲಿ ಈ ವಿಶಿಷ್ಟ ಜಾಗೃತಿ ಆಂದೋಲನವನ್ನು ಆರಂಭಿಸಿರುವುದು ಶುದ್ಧ ವಾತಾವರಣ ನಿರ್ಮಾಣಕ್ಕೂ ಸಹಕಾರಿ.
ಹತ್ತು ಲಕ್ಷ ತುಳಸಿ ಗಿಡಗಳನ್ನು ಬೆಳೆಸಿ ಉಚಿತವಾಗಿ ವಿತರಿಸುವ ಈ ವಿಶಿಷ್ಟ ಯೋಜನೆಯನ್ನು ಗುರುತಿಸಿ ಶ್ರೀ ಅರಬಿಂದೋ ಕಪಾಲಿ ಶಾಸ್ತ್ರಿ ವೇದ ಸಂಸ್ಕೃತ ಸಂಸ್ಥೆ ಮತ್ತು ಕನ್ನಡ ಸಂಸ್ಕೃತ ವಿಶ್ವವಿದ್ಯಾಲಯ ದವರು ಭಾರತೀಯ ವಿದ್ಯಾ ಭವನದಲ್ಲಿ ಸಾಮಾಜಿಕ ಸ್ವಾಸ್ಥ್ಯ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಈಗಾಗಲೇ, ರಾಜಭವನ, ಶ್ರೀ ಕ್ಷೇತ್ರ ಮಂತ್ರಾಲಯ, ಗುಬ್ಬಿ ಶ್ರೀ ಚಿದಂಬರಾಶ್ರಮ, ಜಿಗಣಿಯ ಪ್ರಶಾಂತ ಕುಟೀರ, ಇನ್ನಿತರ ಅನೇಕ ಸ್ಥಳಗಳಲ್ಲಿ 35,000 ಸಸಿಗಳನ್ನು ವಿತರಿಸಲಾಗಿದೆ.
ದಶ ಲಕ್ಷ ತುಳಸಿ ಯೋಜನೆಯ ಯಶಸ್ಸಿನಿಂದ ಉತ್ತೇಜಿತರಾಗಿರುವ ತುಳಸಿಮಠದವರು ಮುಂಬರುವ ದಿನಗಳಲ್ಲಿ, ಸಾಲಿಗ್ರಾಮ ಶಿಲಾ ಅಭಿಯಾನ ನಡೆಸುವ ಯೋಜನೆ ಇದೆ. ಈ ಮೂಲಕ ಸಾಲಿಗ್ರಾಮ ಕುರಿತಂತೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸುವುದು, ಅದರ ಮಹತ್ವವನ್ನು ಸಾರುವುದು ಯೋಜನೆಯ ಪ್ರಮುಖ ಉದ್ದೇಶವೆನಿಸಿದೆ.
ಜ್ಞಾನ, ಭಕ್ತಿ, ವೈರಾಗ್ಯವನ್ನು ಕೊಡುವ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಯಂತ್ರೋದ್ಧಾರಕ ಪ್ರಾಣ ದೇವರ ಪ್ರತಿಷ್ಠಾಪನೆಯು ಹಾಗೂ ಶ್ರೀ ಗುರು ರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನದ ಪ್ರತಿಷ್ಠಾಪನೆಯನ್ನು ದಿನಾಂಕ 14/06/2010 ಮಂತ್ರಾಲಯದ ಶ್ರೀ ರಾಘವೇಂದ್ರಮಠದ 108 ಶ್ರೀ ಸುಯತೀಂದ್ರತೀರ್ಥ ಶ್ರೀಪಾದರು ನೆರವೇರಿಸಲಿದ್ದಾರೆ.
ಬೃಂದಾವನದ ಪ್ರತಿಷ್ಠಾಪನೆಯಂದು ಮಂತ್ರಾಲಯ ಶ್ರೀ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಂಶುಪಾಲರಾದ ಡಾ. ಎನ್. ವಾದಿರಾಜಾಚಾರ್ಯರಿಂದ "ಶ್ರೀ ರಾಘವೇಂದ್ರ ವಿಜಯ " ಕುರಿತು ಉಪನ್ಯಾಸ, ನಂತರ ಸಂಸ್ಥಾನ ಪೂಜೆ, ಶ್ರೀ ಸೂರೀಂದ್ರ ತೀರ್ಥರ ಆರಾಧನೆಯ ಅಂಗವಾಗಿ ಅಲಂಕಾರ ಪಂಕ್ತಿ, ತೀರ್ಥಪ್ರಸಾದ ವ್ಯವಸ್ಥೆ ಕಲ್ಪಿಸಿದೆ. ನಾಲ್ಕು ದಿನಗಳ ಈ ಕಾರ್ಯಕ್ರಮಗಳಿಗೂ ಭಗವದ್ಭಕ್ತರು ಆಗಮಿಸಿ ಸವೆ ಸಲ್ಲಿಸಿ ಶ್ರೀ ಹರಿವಾಯುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
Tulasi Sreedhara
Managing Trustee
SRI GURUKRUPA SEVA TRUST
JOIN tulasimata Group: http://groups. google.com/ group/tulasimata /subscribe
MaTa phno:080-2271 9656
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications