ಗಡೀಪಾರು, ಕತ್ತೆ ಮೆರವಣಿಗೆಗೆ ಬೆಂಗಳೂರಿನಲ್ಲಿ ಫತ್ವಾ

ಇದು ಒಂದು ಕೋಮಿನ ಮುಖಂಡರು ಆ ಮಹಿಳೆಯ ಮೇಲೆ ಮತ್ತು ಆಕೆಯ ಪಾಲಕರ ಮೇಲೆ ಹೇರಿರುವ ಫತ್ವಾ! ಇದು ಜಗತ್ತಿನ ಬೇರೆಲ್ಲೂ ನಡೆದಿಲ್ಲ. ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲೇ ನಡೆದಿರುವುದು.
ಇಷ್ಟಕ್ಕೂ ಆಕೆ ಮಾಡಿರುವ ತಪ್ಪಾದರೂ ಏನು? ಬಾಡಿಗೆಗಿದ್ದ ವ್ಯಕ್ತಿಯೊಂದಿಗೆ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಗಂಡ ತನ್ನ ಕೋಮಿನ ಮುಖಂಡರಿಗೆ ದೂರು ನೀಡಿರುವುದೇ ಆಕೆಯ ಮೇಲೆ ಫತ್ವಾ ಹೇರಲು ಮೂಲ ಕಾರಣ. ಮಹಿಳೆಯ ಪ್ರಕಾರ, ಆ ಬಾಡಿಗೆದಾರನೊಂದಿಗೆ ಮಹಿಳೆ ನೈತಿಕ, ಅನೈತಿಕ ಯಾವ ಸಂಬಂಧವನ್ನೂ ಹೊಂದಿಲ್ಲ.
ನಡೆದದ್ದೇನು? : ನುಸ್ರತ್ (ಹೆಸರು ಬದಲಾಯಿಸಲಾಗಿದೆ) 2005ರಲ್ಲಿ ಜಹಾಂಗೀರ್ (ಹೆಸರು ಬದಲಾಯಿಸಲಾಗಿದೆ) ಎಂಬಾತನೊಂದಿಗೆ ವಿವಾಹವಾಗಿದ್ದಾಳೆ. ಅವರಿಬ್ಬರೂ ಬೆಂಗಳೂರು ಪಶ್ಚಿಮದ ವಿದ್ಯಾರಣ್ಯಪುರದಲ್ಲಿ ವಾಸ್ತವ್ಯ ಹೂಡಿದ್ದಾರೆ. ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು ನಟರಾಜ್ ಎಂಬಾತ ಅವರಿದ್ದ ಕಟ್ಟಡಕ್ಕೆ ಬಾಡಿಗೆದಾರನಾಗಿ ಬಂದಾಗ.
ನುಸ್ರತ್ ಮತ್ತು ನಟರಾಜ್ ಮಧ್ಯೆ ಸಂಬಂಧವಿರಬಹುದೆ ಎಂದು ಜಹಾಂಗೀರ್ ಶಂಕಿಸಿದ್ದಾನೆ. ಆಕೆಯೊಡನೆ ವಿಷಯ ಪ್ರಸ್ತಾಪಿಸಿದಾಗ ನುಸ್ರತ್ ಅಲ್ಲಗಳೆದಿದ್ದಾಳೆ. ಆದರೂ ಆಕೆಯ ಮೇಲೆ ದೈಹಿಕ ದೌರ್ಜನ್ಯ ನಡೆಸಲು ಪ್ರಾರಂಭಿಸಿದ್ದಾನೆ ಜಹಾಂಗೀರ್. ಕೆಲಸಕ್ಕೆ ಹೋಗುವ ನೆಪ ಮಾಡಿ ಅವನಿಲ್ಲದಾಗ ನುಸ್ರತ್ ನಟರಾಜ್ ನೊಂದಿಗೆ ಸಂಧಿಸುತ್ತಾನೆ ಎಂಬುದನ್ನು ನೋಡುವುದೇ ಆತನ ದಿನನಿತ್ಯದ ಕಾಯಕವಾಯಿತು. ಇದನ್ನು ತಿಳಿಯುವುದಕ್ಕಾಗಿ ಚಿಕ್ಕಮಕ್ಕಳನ್ನು ಜಾಸೂಸಿ ಮಾಡಲು ಜಹಾಂಗೀರ್ ಬಿಟ್ಟಿದ್ದಾನೆ.
ಕೊನೆಗೆ, ಆತನ ದೌರ್ಜನ್ಯ ಮಿತಿಮೀರಿದಾಗ ತನ್ನ ಪಾಲಕರಿಗೆ ವಿಷಯ ತಿಳಿಸಿದ್ದಾಳೆ ನುಸ್ರತ್. ನಟರಾಜ್ ನನ್ನು ಮನೆಯಿಂದ ಬಿಡಿಸಿದರೂ ಗಂಡನ ಹಿಂಸೆ ನಿಂತಿಲ್ಲ. ರೋಸತ್ತು ಹೋಗಿ ಆಕೆ ರೈಲು ಹಳಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದು ಗೊತ್ತಾಗಿ ನಟರಾಜ್ ಆಕೆಯನ್ನು ರಾಯಚೂರಿಗೆ ಬಂಧುಗಳ ಬಳಿ ಓಡಿ ಹೋಗಲು ಪ್ರೇರೇಪಿಸಿದ್ದಾನೆ. ಇದನ್ನು ಗೊತ್ತು ಮಾಡಿಕೊಂಡ ಗಂಡ ಪುಸಲಾಯಿಸಿ ತನ್ನ ಧರ್ಮಗುರುಗಳ ಬಳಿಗೆ ತಂದು ನಿಲ್ಲಿಸಿದ್ದಾನೆ.
ನುಸ್ರತ್ ಮಾತನ್ನು ಒಪ್ಪದ ಧರ್ಮಗುರುಗಳು ಎಲ್ಲಜನರೆದುರಿಗೆ ಆಕೆಯ ಕಪಾಳಕ್ಕೆ ಬಿಗಿದಿದ್ದಾರೆ ಮತ್ತು ಮೂರು ದಿನಗಳಲ್ಲಿ ಊರು ಬಿಟ್ಟು ತೊಲಗುವಂತೆ ಆದೇಶ ನೀಡಿದ್ದಾರೆ. ಈ ದಬ್ಬಾಳಿಕೆಯನ್ನು ಸಹಿಸದ ನುಸ್ರತ್ ಗಂಡನ ವಿರುದ್ಧ ಮತ್ತು ಫತ್ವಾ ಹೊರಡಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಉಪ ಪೊಲೀಸ್ ಆಯುಕ್ತ ಎಚ್ಎಸ್ ರೇವಣ್ಣ ಅವರ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿದೆ. ಮಾನವ ಹಕ್ಕು ಆಯೋಗದ ಮುಂದೆಯೂ ದೂರು ಬಂದು ನಿಂತಿದೆ. ಮುಂದೇನು? Over to Justice Subray Rama Nayak, National Human Rights Commissioner, Karnataka.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications