Get Updates
Get notified of breaking news, exclusive insights, and must-see stories!

ಸುರಪುರದಿಂದ ಯಮಪುರಿ ಸೇರಿದ ಬಸ್

KSRTC bus accident Challakere
ಚಳ್ಳಕೆರೆ, ಮೇ. 30: ಯಾದಗಿರಿ ಜಿಲ್ಲೆಯ ಸುರುಪುರದಿಂದ ಬೆಂಗಳೂರು ಕಡೆಗೆ ಹೊರಟಿದ್ದ ರಾಜ್ಯರಸ್ತೆ ಸಾರಿಗೆ ಬಸ್ , ಚಾಲಕನ ನಿರ್ಲಕ್ಷ್ಯ ದಿಂದ ಯಮಪುರಿಗೆ ಸೇರಿದ ದಾರುಣ ಘಟನೆ ಇಂದು ಮುಂಜಾನೆ ನಡೆದಿದೆ. ಈ ಬಸ್ ಅಪಘಾತದಲ್ಲಿ ಸುಮಾರು 10 ಮಕ್ಕಳು ಸೇರಿದಂತೆ 30 ಜನ ಸಾವನ್ನಪ್ಪಿದ್ದು, 28ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಇಂದು ಮುಂಜಾನೆ 2.15 ರ ವೇಳೆಗೆ ಚಳ್ಳಕೆರೆ ಸಮೀಪದ ಸೇತುವೆಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ನಂತರ ಹಳ್ಳಕ್ಕೆ ಬಿದ್ದ ಬಸ್ ಟ್ಯಾಂಕ್ ಗೆ ಬೆಂಕಿ ಹತ್ತಿಕೊಂಡು 30 ಮಂದಿ ಸಜೀವ ದಹನವಾಗಿದ್ದಾರೆ. ಗಾಯಗೊಂಡವರನ್ನು ಚಳ್ಳಕೆರೆಯ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ದುರ್ಘಟನೆಯಲ್ಲಿ ಮೃತರಾದ ಕುಟುಂಬಕ್ಕೆ ತಲಾ 1ಲಕ್ಷ ರು ಪರಿಹಾರ ಹಾಗೂ ಗಾಯಗೊಂಡವರಿಗೆ 25 ಸಾವಿರ ರು.ಗಳ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಘೋಷಿಸಿದ್ದಾರೆ.

ಸಹಾಯವಾಣಿ:
ಚಳ್ಳಕೆರೆ ಆಸ್ಪತ್ರೆ: (08195) 222 644
ಚಳ್ಳಕೆರೆ ಪೊಲೀಸ್ ಠಾಣೆ: (08195) 250 239

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+