ಗಂಡನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪತ್ನಿ

ನಾಗರಾಜ್ ಬೆಂಕಿ ಪಾಲಾದ ನತದೃಷ್ಟಿ ಪತಿ. ಕೇವಲ ಎರಡು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಸೋಮವಾರ ರಾತ್ರಿ ಜಗಳವಾದ ಸಂದರ್ಭದಲ್ಲಿ ಕೋಪಗೊಂಡ ಪತ್ನಿ ವೇದಾವತಿ ಎಂಬುವವರು ಪತಿ ನಾಗರಾಜ್ ಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ.
ಬೆಂಕಿಯ ಉರಿ ತಾಳಲಾರದೆ ನಾಗರಾಜ್ ಕೂಗಿಕೊಂಡಾಗ ನೆರೆಹೊರೆಯವರು ಈತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತನ ಪರಿಸ್ಥಿತಿ ಗಂಭೀರವಾಗಿದೆ. ಬಸವೇಶ್ವರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವವಿವಾಹಿತೆ ವೇದಾವತಿಯನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications