'ಸೀತೆ'ಯನ್ನು ಅಪಹರಿಸಿದ ಯಡಿಯೂರಪ್ಪ!

ನೆರೆ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಮುಖ್ಯಮಂತ್ರಿಯನ್ನು ಬೀದಿಯಲ್ಲೇ ಒದೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿರುವ ಬೆನ್ನಲ್ಲೇ, ದೇವೇಗೌಡ ರಾವಣ ಎಂದು ಗುಡುಗಿದ್ದಾರೆ. ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಸೀತೆಯನ್ನು ಅಪಹರಿಸಿದ ರಾವಣ ಎಂದು ಪತ್ರದಲ್ಲಿ ಜರೆದಿರುವೆ. ಅದಕ್ಕೆ ಕಾರಣವೂ ಇದೆ. ಸೀತೆಯಂದೆರೆ ಭೂಮಿ, ವಸುಂಧರೆಯಾಗಿದ್ದಾಳೆ. ಬಡವರ, ರೈತರ ಭೂಮಿ(ಸೀತೆ)ಯನ್ನು ಅಪಹರಿಸಿದ ರಾವಣ ಎಂದು ಬಣ್ಣಿಸಿರುವುದಾಗಿ ಗೌಡರು ಹೇಳಿದರು.
ನೈಸ್ ಯೋಜನೆಯ ವಿಷಯದಲ್ಲಿ ರೈತರಿಗೆ, ದಲಿತರಿಗೆ ಮತ್ತು ಬಡವರಿಗೆ ಅನ್ಯಾಯ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದ್ದು, ಈ ವರೆಗೊ ಉತ್ತರ ಬಂದಿಲ್ಲ ಎಂದರು. ಯಾವುದೇ ಕಾರಣಕ್ಕೂ ನೈಸ್ ವಿರುದ್ಧದ ಹೋರಾಟ ಕೈಬಿಡುವುದಿಲ್ಲ. ಜೂನ್ 7ರಿಂದ ಮತ್ತೆ ನೈಸ್ ವಿರುದ್ಧ ಬೀದಿ ಹೋರಾಟ ಮಾಡುವುದಾಗಿ ಗೌಡರು ಹೇಳಿದರು.











Click it and Unblock the Notifications