ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನ್ನನ್ನು ನಂಬಿ ನನಗ್ಯಾವ ಪ್ರಚಾರವೂ ಬೇಕಿಲ್ಲ
ಪೇಜಾವರ ಶ್ರೀಗಳು ಕೇವಲ ಪ್ರಚಾರಕ್ಕಾಗಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ ಎಂಬ ನಕ್ಸಲೀಯರು ಆರೋಪಕ್ಕೆ ಶ್ರೀಗಳು ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ. ನಾನೇನು ರಾಜಕಾರಣಿಯಲ್ಲ. ಪ್ರಚಾರದ ಬಯಕೆಯಿಲ್ಲ. ಚುನಾವಣೆಗೆ ನಿಲ್ಲುತ್ತಿಲ್ಲ. ತಮ್ಮ ಕೈಲಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಲೆನಾಡಿನ ಜನರಿಗಾಗಿ ಮಾಡುತ್ತಿದ್ದೇನೆ. ನನ್ನ ಮೇಲೆ ನಕ್ಸಲೀಯರು ಹೊರಿಸಿರುವ ಆರೋಪ ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಲೆನಾಡಿನಲ್ಲಿ ಕುಡಿಯುವ ನೀರು, ವಿದ್ಯುತ್ ಸಮಸ್ಯೆಗಳ ಬಗ್ಗೆ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳು ಜನರಿಗೆ ಖುಷಿ ತಂದಿವೆ. ಈ ಕಾರಣದಿಂದ ತಮ್ಮ ಪ್ರಾಬಲ್ಯ ಕಡಿಮೆಯಾಗಲಿದೆ ಎಂಬ ಭಯ ನಕ್ಸಲೀಯರನ್ನು ಕಾಡತೊಡಗಿದೆ ಎಂದು ಶ್ರೀಗಳು ಆರೋಪಿಸಿದರು. ನಕ್ಸಲೀಯರ ಬಗ್ಗೆ ತಮಗೆ ಸಾಕಷ್ಟು ಸಹಾನುಭೂತಿ ಇದೆ. ನಕ್ಸಲೀಯರು ಮತ್ತು ಸರಕಾರ ಒಪ್ಪಿದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
Comments
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಉಡುಪಿ ಮಲೆನಾಡು ಯಡಿಯೂರಪ್ಪ vishwesha teertha swamiji maoists udupi malenadu yediyurappa
Story first published: Friday, May 7, 2010, 14:53 [IST]