ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ನಾನು ಗಂಡ್ಸೆ ಅಲ್ರೀ : ನಿತ್ಯಾನಂದ

By Mrutyunjaya Kalmat
|
Google Oneindia Kannada News

Swami Nithyananda
ರಾಮನಗರ, ಏ. 30 : ಸ್ವಾಮಿ ನಾನು ಗಂಡಸೇ ಅಲ್ಲ, ಹೀಗಾಗಿ ತಮಿಳು ಚಿತ್ರನಟಿ ರಂಜಿತಾ ಸೇರಿದಂತೆ ಅನೇಕ ಮಹಿಳೆಯರೊಂದಿಗೆ ನಾನು ನಡೆಸಿರುವೆ ಎನ್ನಲಾಗಿರುವ ರಾಸಲೀಲೆ ಆರೋಪಗಳು ಶುದ್ಧ ಸುಳ್ಳು ಎಂದು ವಿವಾದಿತ ದೇವಮಾನವ ಸ್ವಾಮಿ ನಿತ್ಯಾನಂದ ರಾಮನಗರ ನ್ಯಾಯಾಲಯದಲ್ಲಿ ಹೇಳಿಕೆ ನೀಡುವ ಮೂಲಕ ಅಚ್ಚರಿಗೊಳಿಸಿದ್ದಾನೆ.

ಕರ್ನಾಟಕ ಸಿಐಡಿ ಪೊಲೀಸರ ವಶದಲ್ಲಿರುವ ಸ್ವಾಮಿ ನಿತ್ಯಾನಂದನ ವಿಚಾರಣೆಗಾಗಿ ಗುರುವಾರ ರಾಮನಗರದ ಜಿಲ್ಲಾ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನಿತ್ಯಾನಂದ ಈ ಹೇಳಿಕೆ ನೀಡಿದ್ದಾನೆ. ಸ್ವಾಮಿ ನಾನು ಗಂಡಸೇ ಅಲ್ಲ. ಹೀಗಿದ್ದಾಗ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗುವುದು ಹೇಗೆ ? ನನ್ನ ಮೇಲೆ ಮಾಡಿರುವ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಎಲ್ಲವೂ ಕೆಲವರ ಮಾಡಿರುವ ಸಂಚಿನ ಪ್ರತಿಫಲ, ನನ್ನ ಹೆಸರು ಕೆಡಿಸಬೇಕು ಎಂಬ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ವಿಡಿಯೋ ಚಿತ್ರೀಕರಣದಲ್ಲಿರುವುದು ನಾನಲ್ಲ. ಇದನ್ನು ನಂಬಲು ಸಾಧ್ಯವಿಲ್ಲ ಎಂದಾದರೆ, ನಾನು ಲಿಂಗ ಪರೀಕ್ಷೆಗೂ ರೆಡಿ ಎಂದು ನಿತ್ಯಾನಂದ ಹೇಳಿದ್ದಾನೆ.

ಆದರೆ, ನಿತ್ಯಾನಂದನ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಸಿಐಡಿ ಪೊಲೀಸರು, ನಿತ್ಯಾನಂದನ ಪಾಸ್ ಪೋರ್ಟ್ ನಲ್ಲಿ ಗಂಡು ನಮೂದಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ವಿಡಿಯೋ ಚಿತ್ರೀಕರಣದಲ್ಲಿರುವುದು ನಿತ್ಯಾನಂದನೇ ಎಂದು ಹೈದರಾಬಾದ್ ನಿಂದ ಬಂದಿರುವ ವರದಿಯಿಂದ ಬಯಲಾಗಿದೆ. ಮೇ 3 ರಂದು ನಿತ್ಯಾನಂದನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸಿಐಡಿ ಪೊಲೀಸರ ವಶದಲ್ಲಿರುವ ನಿತ್ಯಾನಂದನ ಬಂಧನ ಅವಧಿ ಇಂದು ಮುಗಿಯಲಿದೆ. ಇಂದು ಸಂಜೆ ಮತ್ತೆ ನಿತ್ಯಾನಂದನನ್ನು ರಾಮನಗರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X