ಸ್ವಾಮಿ ನಾನು ಗಂಡ್ಸೆ ಅಲ್ರೀ : ನಿತ್ಯಾನಂದ

ಕರ್ನಾಟಕ ಸಿಐಡಿ ಪೊಲೀಸರ ವಶದಲ್ಲಿರುವ ಸ್ವಾಮಿ ನಿತ್ಯಾನಂದನ ವಿಚಾರಣೆಗಾಗಿ ಗುರುವಾರ ರಾಮನಗರದ ಜಿಲ್ಲಾ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನಿತ್ಯಾನಂದ ಈ ಹೇಳಿಕೆ ನೀಡಿದ್ದಾನೆ. ಸ್ವಾಮಿ ನಾನು ಗಂಡಸೇ ಅಲ್ಲ. ಹೀಗಿದ್ದಾಗ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗುವುದು ಹೇಗೆ ? ನನ್ನ ಮೇಲೆ ಮಾಡಿರುವ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಎಲ್ಲವೂ ಕೆಲವರ ಮಾಡಿರುವ ಸಂಚಿನ ಪ್ರತಿಫಲ, ನನ್ನ ಹೆಸರು ಕೆಡಿಸಬೇಕು ಎಂಬ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ವಿಡಿಯೋ ಚಿತ್ರೀಕರಣದಲ್ಲಿರುವುದು ನಾನಲ್ಲ. ಇದನ್ನು ನಂಬಲು ಸಾಧ್ಯವಿಲ್ಲ ಎಂದಾದರೆ, ನಾನು ಲಿಂಗ ಪರೀಕ್ಷೆಗೂ ರೆಡಿ ಎಂದು ನಿತ್ಯಾನಂದ ಹೇಳಿದ್ದಾನೆ.
ಆದರೆ, ನಿತ್ಯಾನಂದನ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಸಿಐಡಿ ಪೊಲೀಸರು, ನಿತ್ಯಾನಂದನ ಪಾಸ್ ಪೋರ್ಟ್ ನಲ್ಲಿ ಗಂಡು ನಮೂದಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ವಿಡಿಯೋ ಚಿತ್ರೀಕರಣದಲ್ಲಿರುವುದು ನಿತ್ಯಾನಂದನೇ ಎಂದು ಹೈದರಾಬಾದ್ ನಿಂದ ಬಂದಿರುವ ವರದಿಯಿಂದ ಬಯಲಾಗಿದೆ. ಮೇ 3 ರಂದು ನಿತ್ಯಾನಂದನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸಿಐಡಿ ಪೊಲೀಸರ ವಶದಲ್ಲಿರುವ ನಿತ್ಯಾನಂದನ ಬಂಧನ ಅವಧಿ ಇಂದು ಮುಗಿಯಲಿದೆ. ಇಂದು ಸಂಜೆ ಮತ್ತೆ ನಿತ್ಯಾನಂದನನ್ನು ರಾಮನಗರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.











Click it and Unblock the Notifications