ಪುಣೆ ಸ್ಫೋಟಕ್ಕೆ ಕೊಪ್ಪದಲ್ಲಿ ಸಂಚು?

ಚಿಕ್ಕಮಗಳೂರಿನಲ್ಲಿ ಸಂಚು ರೂಪಿಸಿದ್ದಲ್ಲದೆ, ಬಾಂಬ್ ತಯಾರಿಕೆ ತರಬೇತಿಯನ್ನೂ ನೀಡಲಾಗಿತ್ತು. ಇವರಿಗೆ ಉಗ್ರ ಯಾಸಿನ್ ಭಟ್ಕಳ ಮಾರ್ಗದರ್ಶಿಯಾಗಿದ್ದ. ಯಾಸಿನ್ ಹಲವು ವರ್ಷಗಳಿಂದ ಕೊಪ್ಪ, ಚಿಕ್ಕಮಗಳೂರಿನ ಸಂಪರ್ಕ ಹೊಂದಿದ್ದಾನೆ.ಪುಣೆ ಸ್ಫೋಟಕ್ಕೆ ಇಲ್ಲಿಂದಲೇ ಬಾಂಬ್ ತಯಾರಿ ನಡೆದಿರುವ ಸಾಧ್ಯತೆಯಿದೆ ಎಂದು ಎಟಿಎಸ್ ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪುಣೆಯ ಕೋರೆಗಾನ್ ಪಾರ್ಕ್ ಪ್ರದೇಶದಲ್ಲಿ ನಡೆದ ಸ್ಫೋಟದಲ್ಲಿ 17 ಜನ ಅಮಾಯಕರು ಮೃತರಾಗಿದ್ದರು.ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಹಾಗೂ ಸಿಮಿ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಈ ದುಷ್ಕೃತ್ಯ ನಡೆಸಿತ್ತು.ರಿಯಾಜ್, ಯಾಸಿನ್ ಪ್ರಮುಖ ಆರೋಪಿಗಳಾಗಿದ್ದಾರೆ.












Click it and Unblock the Notifications