ಮ್ಯಾಚ್ ನಡೆಸಿದ್ದು ರೈಟ್ ಡಿಸಿಜನ್

ಮಂಗಳವಾರ ನಗರದಲ್ಲಿ ನಡೆದ ಅಗ್ನಿಶಾಮಕ ಹಾಗೂ ಗೃಹರಕ್ಷಕ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು 45 ಸಾವಿರ ಪ್ರೇಕ್ಷಕರಿದ್ದ ಕ್ರೀಡಾಂಗಣದಲ್ಲಿ ಪಂದ್ಯ ನಿಂತುಹೋಗಿದ್ದರೆ ಕಾಲ್ತುಳಿತದಂತ ಭಾರಿ ಅನಾಹುತ ಸಂಭವಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕೈಗೊಂಡ ಕ್ರಮ ಶ್ಲಾಘನೀಯ ನಿರ್ಧಾರ ಎಂದು ಪ್ರಶಂಸಿಸಿದರು.
ಕೇವಲ ಒಂದು ಪಂದ್ಯ ಸ್ಥಳಾಂತರವಾದರೆ ಅದರಿಂದ ನಷ್ಟವೇನೂ ಆಗುವುದಿಲ್ಲ. ಅದರ ಬಗ್ಗೆ ಆತಂಕ ಪಡುವ ಅಗತ್ಯವೂ ಇಲ್ಲ. ಭದ್ರತೆಯ ಕಾರಣದಿಂದ ಪಂದ್ಯ ಸ್ಥಳಾಂತರವಾಗಿಲ್ಲ. ನಿಜವಾದ ಕಾರಣಗಳು ಐಪಿಎಲ್ ಪದಾಧಿಕಾರಿಗಳಿಗೇ ಗೊತ್ತು. ಪ್ರಕರಣದಲ್ಲಿ ಬೆಟ್ಟಿಂಗ್ ದಂಧೆಯ ಕೈವಾಡ ಕೂಡ ಇದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಚಾರ್ಯ ವಿವರಿಸಿದರು.











Click it and Unblock the Notifications