ಅಸ್ಪೃಶ್ಯತೆ ಕರಾಳ ಛಾಯೆ ಇನ್ನೂ ಜೀವಂತ
ಸವಣೂರಿನ ಕಂದಾಯ ಇಲಾಖಾ ಆವರಣದಲ್ಲಿಂದು ಜರುಗಿದ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ವಿಷಯವನ್ನು ಗ್ರಹಿಸುವ ಸಾಮರ್ಥ್ಯ ಪ್ರತಿ ವ್ಯಕ್ತಿಯಲ್ಲಿಯೂ ಏಕರೂಪವಾಗಿದ್ದರೂ, ಅದಕ್ಕೆ ಜ್ಞಾನದ ಬಲವನ್ನು ನೀಡಬೇಕು. ದಲಿತ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದರು.
ದಲಿತ ಸಮುದಾಯದ ಅಭಿವೃದ್ದಿಗೆ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಸರಕಾರದ ಯೋಜನೆಗಳ ಸೌಲಭ್ಯವನ್ನು ಪಡೆಯಲು ನೇರವಾಗಿ ತಮ್ಮನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ ಅವರು, ದಲಿತ ಸಮುದಾಯದ ಪ್ರತಿಯೊಂದು ಬೇಡಿಕೆಗಳಿಗೂ ತಾವು ಸ್ಪಂದಿಸುವ ಭರವಸೆ ನೀಡಿದರು.
ಕಾರ್ಯಕ್ರಮದ ಅಡಿ ಉಪನ್ಯಾಸ ನೀಡಿದ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಧ್ಯಾಪಕರಾದ ಚಂದ್ರುಗೌಡ ಪಾಟೀಲ, ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ಸಾಧನೆಗಳ ಬಗ್ಗೆ ವಿವರಣೆ ನೀಡಿದರು. ಜಾತಿ ವ್ಯವಸ್ಥೆಯ ಅಡಿ ಅಂಬೇಡ್ಕರ್ ಸೇರಿದಂತೆ ದಲಿತ ಸಮುದಾಯ ಎದುರಿಸಿದ ಹಲವಾರು ನೋವಿನ ಚಿತ್ರಣ ನೀಡಿದ ಅವರು, ಅಸ್ಪೃಶ್ಯತೆಯ ಕರಾಳ ಛಾಯೆ ಇಂದಿಗೂ ಉಳಿದುಕೊಂಡಿದೆ ಎಂದರು.
ಸಮಾರಂಭದ
ಅಧ್ಯಕ್ಷತೆಯನ್ನು
ವಹಿಸಿಕೊಂಡಿದ್ದ
ತಾ.ಪಂ
ಅಧ್ಯಕ್ಷೆ
ಲಕ್ಷ್ಮಿ
ಕಲಕೋಟಿ,
ದಲಿತ
ಸಮುದಾಯದ
ಪ್ರತಿಯೊಂದು
ಮಗುವೂ
ಪರಿಪೂರ್ಣ
ಶಿಕ್ಷಣವನ್ನು
ಹೊಂದಬೇಕು
ಎಂಬ
ಆಶಯ
ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ
ತಾ.ಪಂ
ಉಪಾಧ್ಯಕ್ಷೆ
ಶಶಿಕಲಾ
ಪಾಟೀಲ,
ಸ್ಥಾಯಿ
ಸಮೀತಿ
ಅಧ್ಯಕ್ಷ
ರಾಮಣ್ಣ
ಕಳಸದ,
ಪುರಸಭೆಯ
ಅಧ್ಯಕ್ಷ
ಎ.ಎಮ್
ಫರಾಶ್,
ಉಪಾದ್ಯಕ್ಷ
ಶಂಕರ
ದೊಡ್ಮನಿ,
ಮುಖಂಡರಾದ
ಚಿನ್ನಪ್ಪ
ದೇವಸೂರ,
ಶ್ರೀಕಾಂತ
ಲಕ್ಷ್ಮೇಶ್ವರ,
ಹನುಮಂತಪ್ಪ
ದೊಡ್ಮನಿ,
ತಹಶೀಲ್ದಾರ
ಡಾ.
ಪ್ರಶಾಂತ
ನಾಲವಾರ,
ಪಿ.ಐ
ಕೆ.
ಚಂದ್ರಪ್ಪ
ಸೇರಿದಂತೆ
ಹಲವಾರು
ಪ್ರಮುಖರು,
ವಿವಿಧ
ಇಲಾಖಾ
ಅಧಿಕಾರಿಗಳು,
ದಲಿತ
ಸಂಘಟನೆಗಳ
ಪದಾಧಿಕಾರಿಗಳು
ಪಾಲ್ಗೊಂಡಿದ್ದರು.
ಮೆರವಣಿಗೆ
:
ಕಾರ್ಯಕ್ರಮಕ್ಕೂ
ಮುನ್ನ
ನಗರದ
ಪ್ರಮುಖ
ಬೀದಿಗಳಲ್ಲಿ
ಡಾ.
ಬಿ.ಆರ್
ಅಂಬೇಡ್ಕರ್
ಹಾಗೂ
ಡಾ.
ಬಾಬು
ಜಗಜೀವನರಾಂ
ಅವರ
ಭಾವಚಿತ್ರ
ಮೆರವಣಿಗೆಯನ್ನು
ವಿವಿಧ
ವಾಧ್ಯ
ವೈಭವಗಳೊಂದಿಗೆ
ಕೈಗೊಳ್ಳಲಾಯಿತು.
ಅಂಬೇಡ್ಕರ್
ನಗರದಿಂದ
ಆರಂಭಗೊಂಡ
ಮೆರವಣಿಗೆಯಲ್ಲಿ
ಉಪವಿಭಾಗಾಧಿಕಾರಿಗಳು
ಸೇರಿದಂತೆ
ಎಲ್ಲ
ಇಲಾಖಾ
ಪ್ರತಿನಿಧಿಗಳು,
ಸಂಘಟನೆಗಳ
ಪದಾಧಿಕಾರಿಗಳು
ಪಾಲ್ಗೊಂಡಿದ್ದರು.