ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರಿಂಕೋರ್ಟ್ : ರೆಡ್ಡಿಗಳಿಗೆ ಮತ್ತೆ ಹಿನ್ನೆಡೆ

By Mrutyunjaya Kalmat
|
Google Oneindia Kannada News

Supreme Court
ನವದೆಹಲಿ, ಏ. 13 : ಓಬಳಾಪುರಂ ಗಣಿಗಾರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಗಣಿಗಾರಿಕೆ ನಿಷೇಧದ ಅವಧಿಯನ್ನು ಸುಪ್ರಿಂಕೋರ್ಟ್ ಮತ್ತೆ ವಿಸ್ತರಿಸಿದ್ದು, ರೆಡ್ಡಿ ಸಹೋದರರಿಗೆ ತೀವ್ರ ಹಿನ್ನೆಡೆಯಾದಂತಾಗಿದೆ.

ಮುಖ್ಯನ್ಯಾಯಮೂರ್ತಿ ಡಾ ಕೆಜಿ ಬಾಲಕೃಷ್ಣನ್, ನ್ಯಾ.ದೀಪಕ್ ವರ್ಮಾ ಮತ್ತು ಬಿಎಸ್ ಪಾಟೀಲ್ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಏ.22 ರೊಳಗೆ ವರದಿ ಸಲ್ಲಿಸುವಂತೆ ಭಾರತೀಯ ಸರ್ವೆ ಇಲಾಖೆಗೆ ಆದೇಶಿಸಿದೆ. ಮತ್ತೆ ಏ. 23 ರಂದು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಸಚಿವರಾದ ಜನಾರ್ದನರೆಡ್ಡಿ ಮತ್ತು ಕರುಣಾಕರರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಹೊಂದಿರುವ ಗಣಿಗಳಲ್ಲಿ ಗಣಿಗಾರಿಕೆ ನಡೆಸದಂತೆ ನೀಡಿರುವ ತಡೆಯಾಜ್ಞೆ ತೆರವು ಮಾಡಲು ಸುಪ್ರಿಂಕೋರ್ಟ್ ನಿರಾಕರಿಸಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X