ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರಿ ನೌಕರರಿಗೆ ಇಲ್ಲಿದೆ ಸಿಹಿಸುದ್ದಿ !
ಕಳೆದ ವರ್ಷ ಕೇಂದ್ರ ಸರ್ಕಾರ ಶೇ.5 ರಷ್ಟು ತುಟ್ಟಿ ಭತ್ಯೆ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಶೇ. 5.25 ರಷ್ಟು ನೀಡಿತ್ತು. ಅಂತರಿಕ ವ್ಯತ್ಯಾಸಗಳಿದ್ದರಿಂದ 0.25 ರಷ್ಟು ಹೆಚ್ಚಿಸಿತ್ತು. ಈ ಬಾರಿ ಕೇಂದ್ರ ಸರ್ಕಾರದ ಹೆಚ್ಚಳ ನೀತಿಯನ್ನೇ ಅನುಸರಿಸಿ ರಾಜ್ಯಸರ್ಕಾರ ಕೂಡ ಭತ್ಯೆ ಹೆಚ್ಚಿಸುವ ಸಾಧ್ಯತೆ ಇದೆ. ಈ ಸಂಬಂಧದ ಕಡತ ಪ್ರತಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಂಕಿತ ಹಾಕಿದ್ದಾರೆ ಎಂದು ಸುದ್ದಿಯಿದೆ.
ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತುಟ್ಟಿ ಭತ್ಯೆ ಹೆಚ್ಚಳ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ , ಹಾಲಿನ ದರ ಏರಿಕೆಯಿಂದ ಸಿಟ್ಟಾಗಿರುವ ನೌಕರರಿಗೆ ಸಮಾಧಾನಕರವಾಗಿ ಭತ್ಯೆ ಹೆಚ್ಚಳ ಘೋಷಣೆ ಬೇಗ ಆಗುವ ಸಾಧ್ಯತೆಯೂ ಇದೆ.
Comments
ಯಡಿಯೂರಪ್ಪ ಬಿಜೆಪಿ ಯುಪಿಎ ಡಿಎ ತುಟ್ಟಿ ಭತ್ಯೆ ಸರ್ಕಾರಿ ನೌಕರರು ರಾಜ್ಯ ಸರ್ಕಾರ dearness allowance karnataka cabinet yediyurappa bjp
Story first published: Monday, April 12, 2010, 18:17 [IST]