ಸರ್ಕಾರಿ ನೌಕರರಿಗೆ ಇಲ್ಲಿದೆ ಸಿಹಿಸುದ್ದಿ !

ಕಳೆದ ವರ್ಷ ಕೇಂದ್ರ ಸರ್ಕಾರ ಶೇ.5 ರಷ್ಟು ತುಟ್ಟಿ ಭತ್ಯೆ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಶೇ. 5.25 ರಷ್ಟು ನೀಡಿತ್ತು. ಅಂತರಿಕ ವ್ಯತ್ಯಾಸಗಳಿದ್ದರಿಂದ 0.25 ರಷ್ಟು ಹೆಚ್ಚಿಸಿತ್ತು. ಈ ಬಾರಿ ಕೇಂದ್ರ ಸರ್ಕಾರದ ಹೆಚ್ಚಳ ನೀತಿಯನ್ನೇ ಅನುಸರಿಸಿ ರಾಜ್ಯಸರ್ಕಾರ ಕೂಡ ಭತ್ಯೆ ಹೆಚ್ಚಿಸುವ ಸಾಧ್ಯತೆ ಇದೆ. ಈ ಸಂಬಂಧದ ಕಡತ ಪ್ರತಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಂಕಿತ ಹಾಕಿದ್ದಾರೆ ಎಂದು ಸುದ್ದಿಯಿದೆ.
ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತುಟ್ಟಿ ಭತ್ಯೆ ಹೆಚ್ಚಳ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ , ಹಾಲಿನ ದರ ಏರಿಕೆಯಿಂದ ಸಿಟ್ಟಾಗಿರುವ ನೌಕರರಿಗೆ ಸಮಾಧಾನಕರವಾಗಿ ಭತ್ಯೆ ಹೆಚ್ಚಳ ಘೋಷಣೆ ಬೇಗ ಆಗುವ ಸಾಧ್ಯತೆಯೂ ಇದೆ.












Click it and Unblock the Notifications