ಅತಿರುದ್ರ ಮಹಾಯಾಗಕ್ಕೆ ಸಂಭ್ರಮದ ಚಾಲನೆ

Mr and Mrs KS Eshwarappa
ಬೆಂಗಳೂರು, ಏ. 4 : ಹೊಸೂರು ರಸ್ತೆಯ ಕೂಡ್ಲು ಗ್ರಾಮದ ಮಾರುತೀ ಬಡಾವಣೆಯಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆರಂಭಗೊಂಡಿರುವ ಅತಿರುದ್ರ ಮಹಾಯಾಗಕ್ಕೆ ಸಂಭ್ರಮ ಮತ್ತು ಭಕ್ತಿ ಪುರಸ್ಸರ ಚಾಲನೆ ದೊರೆತಿದೆ. ಪದ್ಮಶ್ರೀ ಪುರಸ್ಕೃತ ಶೃಂಗೇರಿ ಮಠದ ಆಡಳಿತಾಧಿಕಾರಿ ಶ್ರೀ ಗೌರೀಶಂಕರಜೀ ಅವರು ಈ ಪುರಾಣೋಕ್ತ ಯಜ್ಞಯಾಗಾದಿಗಳಿಗೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗೌರೀಶಂಕರಜೀ ಅವರು, ಯಜ್ಞಯಾಗಾದಿಗಳಿಂದ ಲೋಕಕಲ್ಯಾಣವಾಗಲಿದ್ದು, ಇಂತಹ ಯಾಗಗಳು ಇಂದಿನ ಯುಗಕ್ಕೆ ಅತ್ಯವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಹಾನಗರದ ಎರಡನೆಯ ಅತಿದೊಡ್ಡ ಧ್ಯಾನಸ್ಥ ಭಂಗಿಯ ಶಿವನ ವಿಗ್ರಹವಿರುವ ಸನ್ನಿಧಿ ಇದಾಗಿದ್ದು, ಮಾಳಿಗೆ ಮನೆ ಸುಬ್ರಹ್ಮಣ್ಯ ಉಡುಪ ಮಾರ್ಗದರ್ಶನದಲ್ಲಿ ಹಾಗೂ ವಂಡಾರು ರಮೇಶ್ ಬಾಯರಿ ಅವರ ನೇತೃತ್ವದಲ್ಲಿ ಈ ಯಾಗ ನಡೆಯುತ್ತಿದೆ.

ಶನಿವಾರ ಆರಂಭವಾಗಿರುವ 12 ದಿನಗಳ ಯಜ್ಞ ಯಾಗಗಳು ಸೇರಿದಂತೆ ಹಲವು ಧಾರ್ಮಿಕ ಸಂಭ್ರಮದ ಸಾವಿರ ತೆಂಗಿನ ಕಾಯಿಯ ಮಹಾಗಣಪತಿ ಹೋಮ, ಸಹಸ್ರ ಚಂಡಿಕಾಯಾಗ, ಅಷ್ಟ ಪವಿತ್ರ ನಾಗಮಂಡಲ ಮತ್ತು ಅತಿರುದ್ರ ಮಹಾಯಾಗಗಳು ನಡೆಯಲಿದ್ದು, ಇವಲ್ಲದೆ ಹತ್ತಾರು ವಿವಿಧ ಮಂಗಳಕರವಾದ ಲೋಕಕಲ್ಯಾಣಪ್ರದವಾದ ಯಜ್ಞಯಾಗಾದಿಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಸಿದ್ಧ ಉದ್ಯಮಿ, ಸಮಾಜಸೇವಕರಾದ ಆರ್. ಪ್ರಭಾಕರ್ ಅವರು, ನಾಡಿನ ಮೂಲೆಮೂಲೆಗಳಿಂದ ನೂರಾರು ಮಂದಿ ವಿವಿಧ ವೇದ ಪುರಾಣಗಳನ್ನು ಅಧ್ಯಯನ ಮಾಡಿದ ಋತ್ವಿಜರು 12 ದಿನಗಳ ಕಾಲ ಈ ಪರಮ ಪುಣ್ಯಪ್ರದವಾದ ಕ್ಷೇತ್ರದಲ್ಲಿ ಸಮಾವೇಶಗೊಂಡು ಧರ್ಮ ಸಂಭ್ರಮವನ್ನು ಸಂಪನ್ನಗೊಳಿಸಲಿದ್ದಾರೆ. ಹಾಗೆಯೇ ಪ್ರತಿ ದಿನವೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಆರ್. ಪ್ರಭಾಕರ ರೆಡ್ಡಿಯವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅತಿರುದ್ರ ಮಹಾಯಾಗದ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ ಆಗಮಿಸಿದ್ದರು. ಅವರನ್ನು ಪ್ರಭಾಕರ್ ರೆಡ್ಡಿ ದಂಪತಿಗಳು ಅಭಿನಂದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+