ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಹೈಕೋರ್ಟ್ ಗೆ ಹೊಸ ಮುಖ್ಯ ನ್ಯಾಯಮೂರ್ತಿ

By Rajendra
|
Google Oneindia Kannada News

Justice Dinakaran asked to go on leave
ನವದೆಹಲಿ, ಏ.3: ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಮೂರ್ತಿಪಿ ಡಿ ದಿನಕರನ್ ಅವರನ್ನು ರಜೆ ಮೇಲೆ ತೆರಳುವಂತೆ ಸುಪ್ರೀಂಕೋರ್ಟ್ ಉನ್ನತ ಮಟ್ಟದ ಸಮಿತಿ ಸೂಚಿಸಿದೆ. ರಾಜ್ಯ ಹೈಕೋರ್ಟ್ ಗೆ ಮುಖ್ಯನಾಯಮೂರ್ತಿಯಾಗಿ ದೆಹಲಿ ಹೈಕೋರ್ಟ್ ನ ಪ್ರಭಾರ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಮದನ್ ಬಿ ಲೋಕೂರ್ ಅವರನ್ನು ನೇಮಕ ಮಾಡಲಾಗಿದೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಪಿ ಡಿ ದಿನಕರನ್ ಅವರು ಕಳೆದ ಡಿಸೆಂಬರ್ ನಿಂದ ನ್ಯಾಯಾಂಗದ ಕೆಲಸಗಳಿಗೆ ಹಾಜರಾಗಿರಲಿಲ್ಲ. ನ್ಯಾಯಾಂಗದ ಕೆಲಸಗಳಿಗೆ ಹಿನ್ನೆಡೆಯಾಗಲಿದೆ ಎಂಬಉದ್ದೇಶದಿಂದ ಸುಪ್ರೀಂಕೋರ್ಟ್ ಉನ್ನತ ಮಟ್ಟದ ಸಮಿತಿಯ ನೇತೃತ್ವ ವಹಿಸಿದ್ದ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರ ಪೀಠ ತಿಳಿಸಿದೆ.

ನ್ಯಾಯಮೂರ್ತಿಗಳ ವಿಶಾಲ ಪಟ್ಟಾ ಜಮೀನಿನ ನಡುವೆ ಸುಮಾರು 200 ಎಕರೆಗಳಷ್ಟು ಪರಂಬೋಕ್ (ಸರಕಾರಿ) ಭೂಮಿ ಇದೆ. ಈ ಜಾಗವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ಬೇಲಿ ಹಾಕಲಾಗಿತ್ತು ಎಂಬ ಆರೋಪ ಪಿ ಡಿ ದಿನಕರನ್ ಅವರ ಮೇಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X