ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಜರಾತ್ ಗಲಭೆ; ಸಮನ್ಸ್ ನಿರ್ಲಕ್ಷಿಸಿದ ಮೋದಿ
ಮಾರ್ಚ್21ರಂದು ಹಾಜರಾಗುವಂತೆ ಸಿಟ್ ಮಾರ್ಚ್ 11ರಂದು ಸಮನ್ಸ್ ಜಾರಿಗೊಳಿಸಿತ್ತು. ಮೋದಿ ಸಮನ್ಸ್ ನಿರ್ಲಕ್ಷಿಸಿರುವ ಕಾರಣ ಕಾನೂನು ಪರ್ಯಾಯಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಗುಜರಾತ್ ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲು ಮೋದಿ ಅವರನ್ನು ಇದೇ ಮೊದಲ ಬಾರಿಗೆ ಕರೆಯಲಾಗಿತ್ತು.
ಗಲಭೆಗಳಲ್ಲಿ ಮೃತಪಟ್ಟ ಎಶಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರು ದೂರು ನೀಡಿದ್ದರು. ಈ ಸಂಬಂಧ ಮೋದಿ ಅವರಿಗೆ ಸಿಟ್ ಸಮನ್ಸ್ ಜಾರಿ ಮಾಡಿತ್ತು. ಸಿಟ್ ಎದುರು ಮೋದಿ ಹಾಜರಾಗದಿರುವ ಬಗ್ಗೆ ಕಾಂಗ್ರೆಸ್ ಟೀಕಿಸಿದೆ. ಸಿಟ್ ನಂತಹ ಸಂವಿಧಾನಿಕ ಸಂಸ್ಥೆಯನ್ನು ಮೋದಿ ತುಚ್ಛೀಕರಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
Story first published: Monday, March 22, 2010, 10:09 [IST]