ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯನಗರ ಪ್ರತಿಷ್ಠಾನಕ್ಕೆ ಭೂಮಿ, ತರೀಕೆರೆ ರಾಜೀನಾಮೆ

By Mrutyunjaya Kalmat
|
Google Oneindia Kannada News

Rahamat Tarikere
ಬಳ್ಳಾರಿ, ಫೆ. 25 : ಹಂಪಿ ವಿಶ್ವವಿದ್ಯಾಲಯಕ್ಕೆ ಸೇರಿದ 80 ಎಕರೆ ಜಮೀನನ್ನು ವಿಜಯನಗರ ಪುನಶ್ಚೇತನ ಪ್ರತಿಷ್ಠಾನ ಟ್ರಸ್ಟ್ ಗೆ ವಹಿಸುವ ರಾಜ್ಯ ಸರಕಾರದ ಕ್ರಮ ವಿರೋಧಿಸಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ ರಹಮತ್ ತರೀಕೆರೆ ಡೀನಶೀಪ್ ಗೆ ರಾಜೀನಾಮೆ ನೀಡಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಕೂಡ ಸರಕಾದ ಕ್ರಮವನ್ನು ಮಾಜಿ ಶಾಸಕರ ವೇದಿಕೆ ತೀವ್ರವಾಗಿ ಖಂಡಿಸಿದೆ.

ಬುಧವಾರ ಕನ್ನಡ ವಿವಿ ಕುಲಪತಿ ಡಾ ಎ ಮುರಿಗೆಪ್ಪ ಅವರಿಗೆ ತರೀಕೆರೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ವಿಷಯವನ್ನು ವಿವಿ ಕುಲಪತಿ ಮುರಿಗೆಪ್ಪ ಸ್ಪಷ್ಟಪಡಿಸಿದ್ದಾರೆ. ತರೀಕೆರೆ ಅವರು ಕಳೆದ ಎರಡು ವರ್ಷಗಳಿಂದ ಕನ್ನಡಸಾಹಿತ್ಯ ಅಧ್ಯಯನ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಅವಧಿ ಇನ್ನೂ ಒಂದು ಬಾಕಿ ಇತ್ತು. ಡೀನ್ ಶಿಪ್ ರಾಜೀನಾಮೆ ಸಲ್ಲಿಸಿದ್ದರೂ ವಿವಿಯ ಪ್ರಾಧ್ಯಾಪಕರಾಗಿ ತರೀಕೆರೆ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X