ಪರೀಕ್ಷೆ ಮುಂದೂಡಿ ಪಾಲಿಕೆ ಚುನಾವಣೆ ನಡೆಸಿ

ಪರೀಕ್ಷೆ ಮುಂದೂಡಿಯಾದರೂ ಸರಿ ಹೈಕೋರ್ಟ್ ಆದೇಶದಂತೆ ನಿಗದಿತ ವೇಳೆಗೆ (ಮಾರ್ಚ್ 30ರೊಳಗೆ) ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರನ್ನೊಳಗೊಂಡ ಪೀಠ ಕಾಲಾವಕಾಶ ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ. ಮಹಾನಗರ ಪಾಲಿಕೆ ಚುನಾವಣೆಗಳು ಕೇವಲ ಒಂದು ದಿನ ಮಾತ್ರ ನಡೆಯಲಿದೆ. ಇದರಿಂದ ಪರೀಕ್ಷೆಗಳಿಗೆ ಯಾವ ತೊಂದರೆ ಆಗಲಿದೆ ಎಂದು ಪ್ರಶ್ನಿಸಿದ ನ್ಯಾಯಾಲಯ, ಚುನಾವಣೆಗೆ ಕಾಲಾವಕಾಶ ಬೇಕು ಎನ್ನುವುದಾದರೆ ಹೈಕೋರ್ಟ್ ನಲ್ಲೇ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಈ ವಿಷಯದಲ್ಲಿ ಸುಪ್ರಿಂಕೋರ್ಟ್ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಕಳೆದ ಮೂರುವರೆ ವರ್ಷಗಳಿಂದ ಅನೇಕ ಕಾನೂನು ಸಮರಗಳನ್ನು ಎದುರಿಸಿರುವ ಬಿಬಿಎಂಪಿ ಚುನಾವಣೆಗಳಿಗೆ ಮಾರ್ಚ್ 30 ರೊಳಗೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಹೈಕೋರ್ಟ್ ರಾಜ್ಯ ಸರಕಾರಕ್ಕೆ ತಾಕೀತು ಮಾಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರಿಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಮಾರ್ಚ್ ತಿಂಗಳು ಪರೀಕ್ಷೆ ಸಮಯವಾಗಿದೆ. 6600 ಕೊಠಡಿಗಳು ಮತ್ತು 48,000 ಸಿಬ್ಬಂದಿಗಳು ಪರೀಕ್ಷೆ ಬೇಕಾಗಿದ್ದು, ಚುನಾವಣೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅಸಾಧ್ಯ. ಈ ಕಾರಣದಿಂದ ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕು ಎಂದು ಸರಕಾರ ಅರ್ಜಿ ಸಲ್ಲಿಸಿತ್ತು. ಫೆ.22 ರೊಳಗೆ ರಾಜ್ಯ ಸರಕಾರ ರಾಜ್ಯ ಚುನಾವಣೆ ಆಯೋಗಕ್ಕೆ ಮೀಸಲಾತಿ ಪಟ್ಟಿಯನ್ನು ಸಲ್ಲಿಸಬೇಕಿತ್ತು.











Click it and Unblock the Notifications