ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿ ಆವರಣದಲ್ಲಿ ಗೋಮಾಂಸ ಭೋಜನ!

By Mrutyunjaya Kalmat
|
Google Oneindia Kannada News

Bangalore university students
ಬೆಂಗಳೂರು, ಫೆ. 18 : ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ತರಲು ಉದ್ದೇಶಿಸಿರುವ ರಾಜ್ಯ ಸರಕಾರ ಕ್ರಮವನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತಕ ವಿಭಾಗದ ದಲಿತ ಒಕ್ಕೂಟ ವಿಶ್ವವಿದ್ಯಾಲಯದ ಆವರಣದಲ್ಲೇ ದನದ ಮಾಂಸ ತಿನ್ನುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಸುಮಾರು 25 ರಿಂದ30 ವಿದ್ಯಾರ್ಥಿಗಳಿದ್ದ ಗುಂಪೊಂದು ವಿಶ್ವವಿದ್ಯಾಲಯದ ಆವರಣದಲ್ಲಿ ದನದ ಮಾಂಸ ಬೇಯಿಸಿ ತಿನ್ನುವ ಮೂಲಕ ಆಹಾರ ಸಂಸ್ಕೃತಿ ಧಕ್ಕೆ ತರುವ ಕೆಲಸ ಕೈಹಾಕಿರುವ ಸರಕಾರದ ಕ್ರಮ ಜನವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರ ಆಹಾರ ಪದ್ದತಿ ಇದಾಗಿದ್ದು, ಇದನ್ನು ಯಾವ ಕಾರಣಕ್ಕೂ ನಿಷೇಧ ಹೇರಬಾರದು. ಸರಕಾರದ ಉದ್ದೇಶಿತ ಗೋಹತ್ಯೆ ನಿಷೇಧ ಕಾಯಿದೆ ತಿದ್ದುಪಡಿ ಕೂಡಲೇ ಕೈಬಿಡದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X