ನಕ್ಸಲರಿಂದ ಮತ್ತೆ ಮಾರಣಹೋಮ : 9 ಹತ್ಯೆ

120 ಶಸ್ತ್ರಸಜ್ಜಿತ ನಕ್ಸಲರು ಜಾಮುವಾ ಜಿಲ್ಲೆಯ ಕಸಾರಿ ಗ್ರಾಮಕ್ಕೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗ್ರಾಮದ ಕೆಲವರು ಪೊಲೀಸರ ಮಾಹಿತಿ ನೀಡುವುದು ಮತ್ತು ಇತ್ತೀಚೆಗೆ ಈ ಗ್ರಾಮದ ಜನರು ಕೆಲ ನಕ್ಸಲರನ್ನು ಹತ್ಯೆಗೈದಿರುವುದು ನಕ್ಸಲರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ. ನಕ್ಸಲರು ನಡೆಸಿದ ಮಾರಣಹೋಮದಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 20 ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 5 ಮಂದಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕ್ಸಲರ ಹತ್ಯೆ ಖಂಡಿಸಿ ಮೂರು ದಿನಗಳ ಬಂದ್ ಘೋಷಣೆ ಆಚರಿಸಲಾಗುತ್ತಿತ್ತು. ಬುಧವಾರ ರಾತ್ರಿಗೆ ಬಂದ್ ಆಚರಣೆ ಮುಗಿಯುತ್ತಿತ್ತು. ಬಂದ್ ನ ಕೊನೆಯ ರಾತ್ರಿಯೇ ಕಸಾರಿ ಗ್ರಾಮಕ್ಕೆ ನುಗ್ಗಿದ ನಕ್ಸಲರು ಮಾರಣಹೋಮ ನಡೆಸಿದ್ದಾರೆ.












Click it and Unblock the Notifications