ಅನೈತಿಕ ಸಂಬಂಧ : ಸ್ಮಶಾನವಾದ ಸಂಸಾರ

ಖಾಸಗಿ ಸಂಸ್ಥೆಯಲ್ಲಿ ಕೆಲ ಮಾಡುತ್ತಿದ್ದ ಪತಿ, ಪತ್ನಿಯ ಮೇಲೆ ಅನುಮಾನಗೊಂಡು ಚಿಕ್ಕಬೇಗೂರಿನಲ್ಲಿರುವ ಮನೆಯಲ್ಲಿ ಮಗುವನ್ನು ನೀರಿನ ಸಂಪಿನಲ್ಲಿ ಮುಳುಗಿಸಿ ಕೊಂದು, ನಂತರ ತಾನು ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾನೆ. ಈ ಸುದ್ದಿಯನ್ನು ತಿಳಿದು ಆಘಾತಗೊಂಡ ಪತ್ನಿ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತಪಟ್ಟವರನ್ನು ದಾವಣಗೆರೆ ಮೂಲದ ಸಂತೋಷ್ಕುಮಾರ್ (28), ಪ್ರಜ್ವಲ್ (5) ಹಾಗೂ ಮಧುಮತಿ (26) ಎಂದು ಗುರುತಿಸಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.











Click it and Unblock the Notifications