ಅನೈತಿಕ ಸಂಬಂಧ : ಸ್ಮಶಾನವಾದ ಸಂಸಾರ

Love, jealousy lead to two suicides and a murder
ಬೆಂಗಳೂರು, ಫೆ. 18 : ಅನುಮಾನದ ಹುಳು ಮನಸ್ಸಿಗೆ ಹೊಕ್ಕರೆ ಇಡೀ ಸಂಸಾರವೇ ನಾಶವಾಗುತ್ತದೆ ಎಂಬುದನ್ನು ಬಿಂಬಿಸುವ ಕತೆ ಇದು. ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿ ಆರು ವರ್ಷ ಕಳೆದ ನಂತರವೂ ಆ ಕುಟುಂಬದಲ್ಲಿ ಅನುಮಾನದ ಪಿಶಾಚಿ ನುಗ್ಗಿತು. ಇದರ ಪರಿಣಾಮವಾಗಿ ಪತಿ, ಪತ್ನಿ ಹಾಗೂ ಮಗು ದುರಂತ ಅಂತ್ಯ ಕಂಡಿದ್ದಾರೆ. ಇಂಥದೊಂದು ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಸಂಸ್ಥೆಯಲ್ಲಿ ಕೆಲ ಮಾಡುತ್ತಿದ್ದ ಪತಿ, ಪತ್ನಿಯ ಮೇಲೆ ಅನುಮಾನಗೊಂಡು ಚಿಕ್ಕಬೇಗೂರಿನಲ್ಲಿರುವ ಮನೆಯಲ್ಲಿ ಮಗುವನ್ನು ನೀರಿನ ಸಂಪಿನಲ್ಲಿ ಮುಳುಗಿಸಿ ಕೊಂದು, ನಂತರ ತಾನು ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ. ಈ ಸುದ್ದಿಯನ್ನು ತಿಳಿದು ಆಘಾತಗೊಂಡ ಪತ್ನಿ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತಪಟ್ಟವರನ್ನು ದಾವಣಗೆರೆ ಮೂಲದ ಸಂತೋಷ್‌ಕುಮಾರ್ (28), ಪ್ರಜ್ವಲ್ (5) ಹಾಗೂ ಮಧುಮತಿ (26) ಎಂದು ಗುರುತಿಸಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+