ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರೆ ಹೋರಾಟ ಕೈಬಿಡಿ, ಸಿಎಂ

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ಫೆ. 16 : ದೇವೇಗೌಡರೇ ಹೋರಾಟ ಕೈಬಿಟ್ಟು ಮಾತುಕತೆ ಬನ್ನಿ. ನೀವು ಹಿರಿಯರು, ಮಾಜಿ ಪ್ರಧಾನಿಗಳು ಬೇರೆ. ನೈಸ್ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯೋಣ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ ವಿನಮ್ರ ಆಹ್ವಾನವಿದು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಯಸ್ಸಿನಲ್ಲಿ ರಾಜ್ಯ ಸುತ್ತಿ ಹೋರಾಟ ನಡೆಸುವುದು ಸರಿಯಲ್ಲ. ದೇಹಕ್ಕೆ ಸುಸ್ತು ಮಾಡಿಕೊಂಡು ಹೋರಾಟ ನಡೆಸುವುದನ್ನು ಕೈಬಿಟ್ಟು ಸರಕಾರದೊಂದಿಗೆ ಮಾತುಕತೆ ನಡೆಸಿ, ಅನ್ಯಾಯವಾಗುತ್ತಿದ್ದರೆ ಸರಿಪಡಿಸೋಣ ಎಂದು ಯಡಿಯೂರಪ್ಪ ಹೇಳಿದರು. ನಿತ್ಯ ಸರಕಾರದ ವಿರುದ್ಧ ಅಪ್ರಚಾರ ಮಾಡಿಕೊಂಡು ತಿರುಗಾಡುವುದು ಸರಿಯಲ್ಲ. ಅದರಿಂದ ಯಾರಿಗೂ ಲಾಭ ಆಗಲ್ಲ. ಅಪ್ರಚಾರ ಮಾಡುವುದರಲ್ಲಿ ನಿಮಗೆ ತೃಪ್ತಿ ಸಿಗಲಿದೆ ಎಂದಾದರೆ ನಮ್ಮ ಅಭ್ಯಂತರವಿಲ್ಲ. ಆದರೆ, ನಿಜವಾದ ಸಮಸ್ಯೆ ಬಗೆಹರಿಸಬೇಕೆಂದು ನಿಮ್ಮ ಅಶಯವಾಗಿದ್ದರೆ ಮಾತುಕತಗೆ ಬನ್ನಿ ಎಂದು ಯಡಿಯೂರಪ್ಪ ಗೌಡರನ್ನು ಆಹ್ವಾನಿಸಿದರು.

ಭೂಸ್ವಾಧೀನ ಸೇರಿದಂತೆ ಸರಕಾರದ ಅನ್ಯಾಯದ ವಿರುದ್ಧ ದೇವೇಗೌಡ ಫೆ 16 ರಿಂದ 24ರ ತನಕ ರಾಜ್ಯಾದ್ಯಂತ ರೈತ ಜಾಗೃತಿ ಅಭಿಯಾನ ಆರಂಭಿಸಿದ್ದು. ಇಂದು ಬೆಂಗಳೂರು ಗ್ರಾಮಾಂತರ ಜೆಲ್ಲೆಯ ಹೆಮ್ಮಿಗೆಪುರದಲ್ಲಿ ರೈತರ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದೆ. ನಂತರ ತುಮಕೂರಿನಲ್ಲಿ ಇಂದು ರೈತ ಸಮಾವೇಶ ನಡೆಯಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X