ನೆರೆ ಸಂತ್ರಸ್ಥರಿಗೆ ಅಮ್ಮನಿಂದ 100 ಮನೆ
ಬೆಂಗಳೂರು,
ಫೆ. 16 : ಮಾತಾ ಅಮೃತಾನಂದಮಯಿ ಮಠವು ನೆರೆ ಪೀಡಿತ ರಾಯಚೂರು ಜಿಲ್ಲೆಯಲ್ಲಿ ಕೇವಲ 20 ದಿನಗಳಲ್ಲಿ 100 ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. id="toptextpromo">ಅಮ್ಮ
ಎಂದೇ ಖ್ಯಾತರಾದ ಅಮೃತಾನಂದಮಯಿ ಅವರು ಫೆ 17 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಬೆಳಗ್ಗೆ 9 ಗಂಟೆಗೆ ನೂತನ ಮನೆಗಳ ಕೀ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಿದ್ದಾರೆ. ರಾಜ್ಯ ಸರಕಾರದ ಜೊತೆಗಿನ ಒಪ್ಪಂದದಂತೆ ರಾಯಚೂರು ಜಿಲ್ಲೆ ಡೊಂಗರಾಮಪುರ ಗ್ರಾಮದಲ್ಲಿ ಈ ಮನೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಮನೆಯನ್ನು ಸುಮಾರು 1.5 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಠದ ಸ್ವಾಮಿ ಅಮೃತಗೀತಾನಂದಪುರಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ನೆರೆ
ಪೀಡಿತ ಪ್ರದೇಶಗಳಲ್ಲಿ ಹಲವು ಸಂಘ ಸಂಸ್ಥೆ ಹಾಗೂ ದಾನಿಗಳು ನೂರಾರು ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ, ನಿರಾಶ್ರಿತರಿಗೆ ಅನುಕೂಲವಾಗುವಂತೆ ಆದಷ್ಟು ಬೇಗ ಅವುಗಳನ್ನು ಪೂರ್ಣಗೊಳಿಸಲು ಉತ್ತೇಜನವಾಗಲಿ ಎಂಬ ಕಾರಣಕ್ಕೆ ಮಠವು ಕೇವಲ 20 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ. ಮಠವು ಡೊಂಗರಾಮಪುರ ಹಾಗೂ ಅತ್ಕೂರು ಗ್ರಾಮದಲ್ಲಿ ಒಟ್ಟು 700 ಮನೆಗಳನ್ನು ನಿರ್ಮಾಣ ಮಾಡಲಿದೆ. ಮನೆಗಳ ನಿರ್ಮಾಣ ಎರಡು ಹಂತದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.











Click it and Unblock the Notifications