ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪುಣೆ ಅಟ್ಟಹಾಸ : ದೇಶಾದ್ಯಂತ ಹೈಅಲರ್ಟ್
ಪುಣೆಯಲ್ಲಿರುವ ಜರ್ಮನ್ ಬೇಕರಿ ಬಳಿ ನಡೆದ ಸ್ಫೋಟ ವೀಕ್ಷಣೆ ನಂತರ ಗೃಹ ಸಚಿವ ಪಿ ಚಿದಂಬರಂ ರಾಜಧಾನಿಗೆ ತೆರಳಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಈ ಮಧ್ಯೆ ಉಗ್ರರು ದಾಳಿ ನಡೆಸಬಹುದಾದ ದೆಹಲಿ, ಇಂದೋರ್ ಮತ್ತು ಕಾನ್ಪುರ್ ನಗರಗಳಲ್ಲಿ ಭಾರಿ ಬಿಗಿ ಭದ್ರತೆಯನ್ನು ನಿಯೋಜಿಸಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಅಲ್ಲದೇ ಗುಜರಾತ್ ರಾಜ್ಯದಲ್ಲಿ ಉಗ್ರರು ದಾಳಿ ನಡೆಸಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿ ಸರಕಾರ ಬಿಗಿ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ಪುಣೆಯಲ್ಲಿ ನಡೆದ ಭಯೋತ್ಪಾದನೆ ಘಟನೆಯಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆ ಕೈವಾಡವಿರುವ ಶಂಕೆ ವ್ಯಕ್ತಪಡಿಸಲಾಗಿದೆ. 2008ರ ನವೆಂಬರ್ 26 ರಂದು ನಡೆದ ಭಯೋತ್ಪಾದನೆ ನಂತರ ಮೊದಲ ಬಾರಿಗೆ ನಡೆದ ಕೃತ್ಯವಾಗಿದೆ. ಪುಣೆ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು,57 ಮಂದಿ ಗಾಯಗೊಂಡಿದ್ದಾರೆ.
ಮನಮೋಹನ್ ಸಿಂಗ್ manmohan singh p chidambaram ಪಿ ಚಿದಂಬರಂ delhi ದೆಹಲಿ ಇಂದೋರ್ indore ಪುಣೆ ಸ್ಫೋಟ pune blast high alert
Story first published: Sunday, February 14, 2010, 15:13 [IST]