ವಾಟಾಳ್ ಗೆ ಕನ್ನಡ ಭೂಷಣ ರಾಜ್ಯ ಪ್ರಶಸ್ತಿ
ಮೈಸೂರು,
ಫೆ 3 : ಐದು ದಶಕಗಳಿಂದ ಕನ್ನಡ ಚಳುವಳಿಯನ್ನು ರಾಜ್ಯದ ಉದ್ದಗಲಕ್ಕೂ ನಡೆಸುತ್ತಾ, ಲಾಟಿ ಏಟು ಬೂಟು ಏಟು ತಿಂದು ಸೆರೆಮನೆವಾಸ ಅನುಭವಿಸಿ ಕನ್ನಡ ವಿರೋಧಿಗಳಿಗೆ ಸಿಂಹಸ್ವಪ್ನವಾಗಿ ಕನ್ನಡಕ್ಕಾಗಿ ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿರುವ 'ಛಲದಂಕ ಮಲ್ಲ' ವಾಟಾಳ್ ನಾಗರಾಜ್ ಅವರಿಗೆ 'ಕನ್ನಡ ಭೂಷಣ ರಾಜ್ಯ ಪ್ರಶಸ್ತಿ' ನೀಡಲು ಅಖಿಲ ಭಾರತ ಅಂಬರೀಷ್ ಅಭಿಮಾನಿಗಳ ಸಂಘ ನಿರ್ಧರಿಸಿದೆ. id="toptextpromo">ಈ
ಪ್ರಶಸ್ತಿಯನ್ನು ಪ್ರಸಕ್ತ ವರ್ಷದಿಂದ ಆರಂಭಿಸಲಾಗುತ್ತಿದ್ದು ಮೊಟ್ಟ ಮೊದಲ ಬಾರಿಗೆ ವಾಟಾಳ್ ಅವರಿಗೆ ನೀಡಲಾಗುತ್ತಿದೆ. ಫೆ.4 ರಂದು ಬೆಳಿಗ್ಗೆ 11ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅಂಗಣದಲ್ಲಿ ಪ್ರಶಸ್ತಿ ಪ್ರದಾನ ಮತ್ತು ವಾಟಾಳ್ ಅಭಿನಂದನಾ ಸಮಾರಂಭ ಅದ್ದೂರಿಯಾಗಿ ನೆರವೇರಲಿದೆ. ರಾಜ್ಯ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮಳೀಮಠ್ ಅಧ್ಯಕ್ಷತೆವಹಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಮಾರಂಭವನ್ನು
ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೆ ಗೌಡ ಉದ್ಘಾಟಿಸಲಿದ್ದಾರೆ. ಖ್ಯಾತ ಸಾಹಿತಿ ಡಾ. ಕಂಬಾರ ವಾಟಾಳ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಮಾರಂಭದಲ್ಲಿ ಲಲಿತಾ ನಾಯಕ್, ಮುಖ್ಯಮಂತ್ರಿ ಚಂದ್ರು, ಕವಿ ಸಿದ್ದಲಿಂಗಯ್ಯ, ಸಾಹಿತಿ ದೊಡ್ಡರಂಗೇಗೌಡ, ನಲ್ಲೂರು ಪ್ರಸಾದ್, ದಲಿತ ಸಮಿತಿ ಅಧ್ಯಕ್ಷಎನ್. ಮೂರ್ತಿ ಮುಂತಾದವರು ಭಾಗವಹಿಸಲಿದ್ದಾರೆಂದು ಸಂಘದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.











Click it and Unblock the Notifications