ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಿರುಪತಿ ರೈಲು ಚಾ.ನಗರಕ್ಕೂ ಬರಲಿದೆ!
ಚಾಮರಾಜನಗರ >> ನಂಜನಗೂಡು>> ಮೈಸೂರು>> ಬೆಂಗಳೂರು ಮಾರ್ಗವಾಗಿ ತಿರುಪತಿಗೆ ತೆರಳುವ ರೈಲಿಗೆ, ರೈಲ್ವೆ ರಾಜ್ಯ ಸಚಿವ ಕೆ ಎಚ್ ಮುನಿಯಪ್ಪ ನಾಳೆ ಮಧ್ಯಾಹ್ನ 3ಗಂಟೆಗೆ ಹಸಿರು ನಿಶಾನೆ ತೋರಿಸಲಿದ್ದಾರೆಂದು ಚಾಮರಾಜನಗರ ಸಂಸದ ಧ್ರುವ ನಾರಾಯಣ್ ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಮಧ್ಯಾಹ್ನ 1 .30 ಕ್ಕೆ ರೈಲ್ವೆ ನಿಲ್ದಾಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಧ್ರುವನಾರಾಯಣ, ಸಿದ್ದರಾಮಯ್ಯ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಇಜ್ಜತ್ ಮಾಸಿಕ ಪಾಸ್ ನ್ನು2500 ಮಂದಿಗೆ ವಿತರಿಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.
Comments
ಮೈಸೂರು ಚಾಮರಾಜನಗರ ಸಿದ್ದರಾಮಯ್ಯ siddaramaiah mysore ತಿರುಪತಿ kh muniyappa ಮಮತಾ ಬ್ಯಾನರ್ಜಿ ಕೆಎಚ್ ಮುನಿಯಪ್ಪ ರೈಲು chamarajanagar mamta banerjee
Story first published: Thursday, February 4, 2010, 15:14 [IST]