ನಂದಿನಿ ಹಾಲಿನ ದರ ಮತ್ತಷ್ಟು ಏರಿಕೆ ಸಂಭವ

ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಮ್ಮಿ. ನಿರ್ವಹಣೆ ಮತ್ತು ಸರಕು ಸಾಗಾಣೆ ದರ ಏರಿಕೆಯಾಗಿದೆ.ಆದುದರಿಂದ ದರ ಪರಿಷ್ಕರಣೆ ಅನಿವಾರ್ಯ. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ಕೆಎಂಎಫ್ ನಷ್ಟದಲ್ಲಿಲ್ಲ. ಇತ್ತೀಚೆಗೆ ಲಾಭದ ಪ್ರಮಾಣದಲ್ಲಿ ಕಮ್ಮಿಯಾಗಿದೆ ಎಂದು ಮಂಡಳಿ ಅಧ್ಯಕ್ಷ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಈ ಮಧ್ಯೆ 'ಕ್ಷೀರಬಂಧು' ಬಿರುದಾಂಕಿತ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತು ತಪ್ಪಿದ್ದಾರೆ. ಸರಕಾರದ ಕನಸಿನ ಯೋಜನೆಯಾದ ರಾಜ್ಯದ ಹಾಲು ಉತ್ಪಾದಕರಿಗೆ ಎರಡು ರುಪಾಯಿ ಪ್ರೋತ್ಸಾಹ ದನ ಯೋಜನೆಗೆ ಕಳೆದ ನಾಲ್ಕು ತಿಂಗಳಿನಿಂದ ಹಣ ನಿದ್ದೆ ಏಕಾಏಕಿ ಬಂದ್ ಮಾಡುವ ಮೂಲಕ ಹೈನೋದ್ಯಮಿಗಳ ಕೋಪಕ್ಕೆತುತ್ತಾಗಿದ್ದಾರೆ.












Click it and Unblock the Notifications