ಸೂರ್ಯಗ್ರಹಣ : ಉಡುಪಿಯಲ್ಲಿ ವಿಶೇಷ ಪೂಜೆ

ಉಡುಪಿ : ಪರ್ಯಾಯ ಮಹೋತ್ಸವದ ಭರದ ಸಿದ್ದತೆಯಲ್ಲಿರುವ ಉಡುಪಿಯಲ್ಲಿ ಜನಸಂಚಾರ ಹೆಚ್ಚುಕಮ್ಮಿ ಸ್ಥಬ್ದ. ಮೋಡ ಕವಿದ ವಾತಾವರಣ. ನಗರದ ಮತ್ತು ಜಿಲ್ಲೆಯ ಪ್ರಸಿದ್ದ ಶ್ರೀ ಕೃಷ್ಣಮಠ, ಅನಂತೇಶ್ವರ, ಕಡಿಯಾಳಿ, ಕುಂಜಾರು, ಆನೆಗುಡ್ಡೆ, ಕೊಲ್ಲೂರು, ಮಂದರ್ತಿ, ಮುಂಡ್ಕೂರು, ಎಲ್ಲೂರು ಮುಂತಾದ ದೇವಾಲಯಗಳಲ್ಲಿ ವಿಶೇಷ ಪೂಜೆ. ಮಲ್ಪೆ ಕಡಲ ತೀರದಲ್ಲಿ ಜನಸಾಗರ. ವಡಭಾಂಡೇಶ್ವರನ ಸನ್ನಿಧಾನದಲ್ಲಿ ಹೋಮ ಹವನ. ರಥಬೀದಿಯಲ್ಲಿ ಗ್ರಹಣ ಪ್ರಯುಕ್ತ ಬೇಗನೆ ಸಂಪನ್ನಗೊಂಡ ಚುರ್ಣೋತ್ಸವ. ವರದಿ : ಸತ್ಯಬೋಧ, ಪಣಿಯಾಡಿ
ಮಂಗಳೂರು : ಸೂರ್ಯನ ಕಣ್ಣುಮುಚ್ಚಾಲೆ ಮಧ್ಯೆ ಮಹಾನಗರದ ದೈನಂದಿನ ಚಟುವಟಿಕೆ ಏರುಪೇರು. ಮನೆಯಿಂದ ಹೊರಗೆ ಬರದ ಜನ. ಶರವು, ಕದ್ರಿ, ಗೋಕರ್ಣನಾಥೇಶ್ವರ, ಮಂಗಳಾದೇವಿ, ಧರ್ಮಸ್ಥಳ, ಕುಕ್ಕೆ, ಕಟೀಲು, ಬಪ್ಪನಾಡು ದೇವಾಲಯಗಳಲ್ಲಿ ವಿಶೇಷ ಪೂಜೆ. ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ. ಮಾಹಿತಿ : ಶೃತಿ, ವಿದ್ಯಾರ್ಥಿ, ಕುಲಶೇಖರ
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಸಂಕ್ರಾಂತಿಯಂದು ಗಿಜಿಗುಡುತ್ತಿದ್ದ ದಾಜಿಬಾನ್ ಪೇಟ್, ಬಂಡಿವಾಡ ಅಗಸಿ ಬಸ್ ನಿಲ್ದಾಣಗಳು ಕಂಕಣ ಸೂರ್ಯಗ್ರಹಣ ನಿಮಿತ್ತ ಭಣಗುಡುತ್ತಿದ್ದವು. ಅನೇಕ ಓಣಿಗಳಲ್ಲಿ ಗ್ರಹಣದ ಸಮಯದಲ್ಲಿ ಜನ ಹೊರಬರದೇ ಮನೆಯಲ್ಲಿಯೇ ಉಳಿದರು. ಆದರೆ, ನೃಪತುಂಗ ಬೆಟ್ಟದಲ್ಲಿ ಮನೆಯಿಂದ ಹೊರಬಿದ್ದ ಅನೇಕ ಆಸಕ್ತರು ಸೂರ್ಯ ಕನ್ನಡಕ ಬಳಸಿ ಸೂರ್ಯನನ್ನು ಚಂದ್ರ ಭಾಗಶಃ ನುಂಗಿದ್ದನ್ನು ವೀಕ್ಷಿಸಿ ವಿಸ್ಮಿತರಾದರು. ಮಾಹಿತಿ : ಗೋಪಾಲ ಕುಲಕರ್ಣಿ, ಹುಬ್ಬಳ್ಳಿ.
ಕೊಳ್ಳೇಗಾಲ : ಚಾಮರಾಜಾನಗರ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಇಂದು ಬೆಳಗ್ಗೆ ಒಳ್ಳೆಯ ಬಿಸಿಲು. ಆಕಾಶ ಶುಭ್ರನೀಲಿಯಾಗಿರುವುದರಿಂದ ಗ್ರಹಣ ವೀಕ್ಷಕರಿಗೆ ಆನಂದವೋ ಆನಂದ. ಬರಿಗಣ್ಣಿನಿಂದ ಗ್ರಹಣ ನೋಡಬೇಡಿ ಎಂದು ಮಕ್ಕಳಿಗೆ ತಿಳಿಯಹೇಳುವುದೇ ಕೊಳ್ಳೇಗಾಲದಲ್ಲಿ ಹಿರಿಯರಿಗೆ ದೊಡ್ಡ ಕೆಲಸವಾಗಿದೆ ಎಂದು ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿರುವ ಗೊಬ್ಬರದ ಅಂಗಡಿ ಮಾಲೀಕ ಜ್ಞಾನೇಶ್ ತಿಳಿಸಿದ್ದಾರೆ. ಸೌರ ಕನ್ನಡಕ ಇಲ್ಲಿ ಹೆಚ್ಚಾಗಿ ಸಿಗುವುದಿಲ್ಲ ಆದ್ದರಿಂದ ಮಕ್ಕಳಿಗೆ ನಿರಾಶೆ. ಕೆಲವರು ಮೈಸೂರಿನಿಂದ ಕನ್ನಡಕ ತಂದಿದ್ದಾರೆ. ಒಂದೇ ಕನ್ನಡಕ ಬಳಸಿ ಸರತಿಯಲ್ಲಿ ಆಕಾಶ ನೋಡುವ ಸಂಭ್ರಮ ಮಕ್ಕಳಿಗೆ.
ವಿಡಿಯೋ : ನಭೋಮಂಡಲದಲ್ಲಿ ಬಂಗಾರದ ಬಳೆ
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications