ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮನುಷ್ಯರ ಕಾಟದಿಂದ ಕಾಡಾನೆಗಳಿಗೆ ಮುಕ್ತಿ!
ಖಾಸಗಿ ಒಡೆತನದಲ್ಲಿದ್ದ ಕೊಳ್ಳೇಗಾಲ ಕಾರಿಡಾರ್ (ಎದ್ಯಾರಳ್ಳಿ , ಹೊಂಡರ್ ಬಾಳ್ ,ದೊಡ್ಡ ಸಂಪಿಗೆ ಪ್ರದೇಶ) ನಲ್ಲಿ ಹೆಚ್ಚು ವನ್ಯಜೀವಿಗಳು ಕಂಡು ಬರುತ್ತವೆ. ಸುಮಾರು 25 ಎಕರೆ ಈ ಜಾಗವನ್ನು ಸರ್ಕಾರೇತರ ಸಂಸ್ಥೆಯಾದ ವೈಲ್ಡ್ ಫೀಲ್ಡ್ ಟ್ರಸ್ಟ್ ಆಫ್ ಇಂಡಿಯಾ ( WTI) ತನ್ನ ವಶಕ್ಕೆ ತೆಗೆದುಕೊಂಡಿದ್ದು, ಇಂಟರ್ ನ್ಯಾಷನಲ್ ಫಂಡ್ ಫಾರ್ ಅನಿಮಲ್ ವೆಲ್ ಫೇರ್ (IFAW) ಸಹಕಾರದಿಂದ ಈ ಜಾಗವನ್ನು ರಾಜ್ಯ ಸರ್ಕಾರದ ಸುಪರ್ದಿಗೆ ನೀಡಿದೆ.
ಕೊಳ್ಳೇಗಾಲ ಅರಣ್ಯ ಪ್ರದೇಶದಿಂದ ಬಿಳಿಗಿರಿ ರಂಗನ ಬೆಟ್ಟದ ದೇವಸ್ಥಾನದ ಬೆಟ್ಟ ಗುಡ್ಡ ತಪ್ಪಲಿನ ಪ್ರದೇಶದಲ್ಲಿ ಈ ಕಾರಿಡಾರ್ ಜಾಗ ಸೇರುತ್ತದೆ. ಈ ಅಮೂಲ್ಯ ಜಾಗವನ್ನು ಹಸ್ತಾಂತರ ಮಾಡಿದ್ದು ಆನೆಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Comments
ಚಾಮರಾಜನಗರ chamarajanagar ಎನ್ ಜಿಒ ಅರಣ್ಯ ಇಲಾಖೆ ವನ್ಯಜೀವಿ district news kollegal ಜಿಲ್ಲಾಸುದ್ದಿ ಕೊಳ್ಳೇಗಾಲ animal karnataka forest
Story first published: Friday, January 15, 2010, 16:13 [IST]