ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಬಿಎಂಪಿ ಚುನಾವಣೆ ಸುಪ್ರಿಂಕೋರ್ಟ್ ಅಸ್ತು
ವಿಭಾಗೀಯ ಪೀಠದ ತೀರ್ಪು ಪ್ರಶ್ನಿಸಿ ವಸುಧಾ ಮತ್ತು ಇತರ ಏಳು ಮಂದಿ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಬಿಎಸ್ ಚವಾಣ್ ಅವರನ್ನೊಳಗೊಂಡ ಪೀಠವು ಇನ್ನು ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ಈಗ ಪ್ರಕಟಿಸಿರುವ ವೇಳಾಪಟ್ಟಿಯಂತೆ ಚುನಾವಣೆ ಪ್ರಕ್ರಿಯೆ ನಡೆಯಬೇಕು. ರಾಜ್ಯ ಸರಕಾರದ ಮೀಸಲು ಕ್ರಮದಲ್ಲಿ ಚುನಾವಣೆ ನಡೆದರೆ ತಪ್ಪಿಲ್ಲ ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿದೆ.
ಪಾಲಿಕೆ ಚುನಾವಣೆಯನ್ನು ಪುನಃ ಮುಂದೂಡಲು ಮತ್ತು ಪರಿಶಿಷ್ಟ ಜಾತಿ, ಪಂಗಡಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ವಾರ್ಡ್ ನಿಗದಿಪಡಿಸುವ ಬದಲಾಗಿ ಇಡೀ ಬೆಂಗಳೂರು ನಗರವನ್ನೇ ಘಟಕವಾಗಿ ಪರಿಗಣಿಸಿ ಮೀಸಲಾತಿ ನೀತಿ ಅನ್ವಯಿಸುವಂತೆ ನಿರ್ದೇಶನ ನೀಡಲು ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿತು. ಇಡೀ ಬೆಂಗಳೂರು ನಗರವನ್ನು ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ನೀಡಬೇಕು ಎಂಬ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿಗೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿತು.
ಬಿಬಿಎಂಪಿ supreme court ಸುಪ್ರಿಂಕೋರ್ಟ್ ಚುನಾವಣೆ bbmp election ವಾರ್ಡ್ ರಾಜ್ಯ ಚುನಾವಣೆ ಆಯೋಗ ಕೆ ಜಿ ಬಾಲಕೃಷ್ಣನ್ kg balakrishnan state election commission ward
Story first published: Thursday, January 7, 2010, 10:00 [IST]