ಸುನಾಮಿ ಕರಾಳ ದಿನಕ್ಕೆ ಐದು ವರ್ಷಗಳು

ನಮ್ಮ ದೇಶದ ಸಮುದ್ರ ತೀರ ಪ್ರದೇಶಗಳಲ್ಲಿನ ಅಂಡಮಾನ್ ನಿಕೋಬಾರ್ ದ್ವೀಪಗಳು, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ, ಕೇರಳ ತೀರ ಪ್ರದೇಶಗಳನ್ನು ಒಮ್ಮೆಲೆ ಸಮುದ್ರ ಆಪೋಶನ ತೆಗೆದುಕೊಂಡಿತ್ತು. ಸುನಾಮಿ ಅಬ್ಬರಕ್ಕೆ ತೀರ ಪ್ರದೇಶಗಳಲ್ಲಿನ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಸಾವಿರಾರು ಮಂದಿ ಅನಾಥರಾದರು.
ತೀರ ಪ್ರದೇಶಗಳಲ್ಲಿನ ಜನ ಮನೆಮಠ ಕಳೆದುಕೊಂಡು ನಿರ್ಗತಿಕರಾದರು. ಅನಾಥರಾದವರಿಗೆ ಸರಕಾರದ ಪರಿಹಾರ ಲಭಿಸಿದ್ದು ಮಾತ್ರ ಅಷ್ಟಕ್ಕಷ್ಟೆ. ಮೀನುಗಾರ ಕುಟುಂಬಗಳಿಗೆ ಇಂದಿಗೂ ಸರಕಾರದ ಪರಿಹಾರ ಹಣ ಸಿಕ್ಕಿಲ್ಲ ಎಂಬುದು ಶೋಚನೀಯ ಸಂಗತಿ.
ಸುನಾಮಿ ಅಬ್ಬರಕ್ಕೆ ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಒಟ್ಟು 230,000 ಮಂದಿ ಬಲಿಯಾದರು. ಇಂಡೋನೇಷಿಯಾ ಸಮುದ್ರ ಗರ್ಭದಲ್ಲಿ ಉಂಟಾದ ಭೂಕಂಪನ ಸುನಾಮಿಗೆ ಕಾರಣವಾಗಿತ್ತು. ಸುನಾಮಿ ವೇಳೆ ಬಿಡುಗಡೆಯಾದ ಶಕ್ತಿ ಹಿರೋಶಿಮಾ ಮೇಲೆ ಅಣುಬಾಂಬ್ ಸ್ಫೋಟಿಸಿದ್ದಕ್ಕಿಂತಲೂ 550 ದಶಲಕ್ಷದಷ್ಟು ಹೆಚ್ಚಾಗಿತ್ತು.












Click it and Unblock the Notifications