ಕ್ರಿಸ್ಮಸ್ ಪ್ರಯುಕ್ತ ತೆಲಂಗಾಣ ಬಂದ್ ಇಲ್ಲ

ಲಕ್ಷ ಜನರ ಬಲಿದಾನವಾದರು ನಾವು ಈ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ, ಹೈದರಾಬಾದ್ ನಗರವನ್ನು ರಾಜಧಾನಿಯಾಗಿರಿಸಿ ಪ್ರತ್ಯೇಕ ರಾಜ್ಯ ರಚಿಸಿಲ್ಲವಾದರೆ ರಕ್ತಪಾತವಾದಿತು ಎಂದು ಟಿಆರ್ಎಸ್ ಮುಖ್ಯಸ್ಥ ಚಂದ್ರಶೇಖರ ರಾವ್ ಸರಕಾರವನ್ನು ಎಚ್ಚರಿಸಿದ್ದಾರೆ. ಸಾವಿರಾರು ಮಂದಿ 'ಜೈ ತೆಲಂಗಾಣ' ಘೋಷಣೆ ಕೂಗುತ್ತಾ ರಸ್ತೆ ತಡೆ, ಕಲ್ಲು ತೂರಾಟ ನಡೆಸುತ್ತಿದ್ದಾರೆ ಮತ್ತು 9ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ.
ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ವಿದ್ಯಮಾನಗಳು ನಡೆದಿದ್ದು ತಮ್ಮದೇ ಸರಕಾರವನ್ನು ನಿಂದಿಸುತ್ತಾ ತೆಲಂಗಾಣ ವ್ಯಾಪ್ತಿಯ 12 ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಿದ್ದು ಈ ಬಿಕ್ಕಟ್ಟಿಗೆ ವೈಎಸ್ಆರ್ ಪುತ್ರ ಜಗನ್ಮೋಹನ್ ರೆಡ್ಡಿ ಕಾರಣ ಎನ್ನುವ ಗಂಭೀರ ಆರೋಪ ಹೊರಿಸಿದ್ದಾರೆ. ಇತ್ತ, ಚಂದ್ರಶೇಖರ ರಾವ್ ಮತ್ತು ಪಕ್ಷದ ಇನ್ನೊಬ್ಬ ಸಂಸದ ರಾಜೀನಾಮೆ ಪತ್ರವನ್ನು ಸ್ಪೀಕರ್ ಮೀರಾ ಕುಮಾರ್ ಗೆ ರವಾನಿಸಿದ್ದಾರೆ. 29 ಟಿಆರ್ಎಸ್ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.












Click it and Unblock the Notifications