ಲೋಕಾಯುಕ್ತರ ವರದಿ ಅನ್ವ ಕ್ರಮ, ಸಿಎಂ

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ಸಿನ ಎ ಮಂಜು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ 20 ಕಬ್ಬಿಣದ ಅದಿರು ಗಣಿ ಗುತ್ತಿಗೆ ಮಂಜೂರು ಮಾಡಲಾಗಿದೆ. ಆದರೆ, ತಾವು ಅಧಿಕಾರಕ್ಕೆ ಬಂದ ನಂತರ ಹೊಸದಾಗಿ ಯಾವುದೇ ಗುತ್ತಿಗೆ ನೀಡಿಲ್ಲ ಎಂದರು. ಒಟ್ಟು 177 ಗಣಿ ಗುತ್ತಿಗೆಗಳ ಪೈಕಿ 103 ಗಣಿಗಳು ಮಾತ್ರ ಚಾಲ್ತಿಯಲ್ಲಿವೆ. 74 ನಿಷ್ಕ್ರಿಯವಾಗಿವೆ. ಕಬ್ಬಿಣದ ಅದಿರು ಕಾರ್ಖಾನೆ ಸ್ಥಾಪಿಸಲು ದೊಡ್ಡ ಉದ್ದಿಮೆದಾರರು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅವುಗಳ ಪರಿಶೀಲನೆ ನಡೆಯುತ್ತಿದೆ. ಆದರೆ, ಯಾರಿಗೂ ಅನುಮತಿ ನೀಡಿಲ್ಲ ಎಂದು ಹೇಳಿದರು.
ಲೋಕಾಯುಕ್ತರು ಗುರುತಿಸಿರುವ 99 ಒತ್ತುವರಿ ಪ್ರಕರಣಗಳ ಪೈಕಿ 56 ಗಣಿಗಳ ಗುತ್ತಿಗೆ ರದ್ದುಗೊಳಿಸಲಾಗಿದ್ದು, ಆ ಪೈಕಿ 26 ಗಣಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಳ್ಳಾರಿಯಲ್ಲಿ 56 ಷರತ್ತು ಉಲ್ಲಂಘನೆ ಪ್ರಕರಣಗಳಿದ್ದು, ಅವುಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.











Click it and Unblock the Notifications