ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ ವಜಾ

ಕಸಬ್ ಪ್ರಕರಣ ದೇಶದ ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಇಂತಹ ಪ್ರಕರಣ ಪರ ವಕೀಲರಾಗಿರುವ ಕಜ್ಮಿ ತೋರಿದ ನಿರ್ಲಕ್ಷ ಸರಿಯಲ್ಲ. ಇದರಿಂದಾಗಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅಗೌರವ ಅಶಿಸ್ತು ಪ್ರದರ್ಶಿಸಿದ್ದ ಕಜ್ಮಿಗೆ ಈ ಹಿಂದೆಯೇ ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಎಲ್ ತೆಹಿಲಿಯಾನಿ ಎಚ್ಚರಿಕೆ ನೀಡಿದ್ದರು. ಅವರ ಅಶಿಸ್ತಿನ ವರ್ತನೆ ಮುಂದುವರೆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ. ನ್ಯಾಯಾಲಯದ ಅ ಕ್ರಮ ಅಚ್ಚರಿ ತರಿಸಿದೆ ಎಂದು ಸರಕಾರದ ಪರ ವಕೀಲ ಉಜ್ವಲ್ ನಿಕ್ಕಂ ಹೇಳಿದ್ದಾರೆ.
(ಏಜನ್ಸೀಸ್)












Click it and Unblock the Notifications