Get Updates
Get notified of breaking news, exclusive insights, and must-see stories!

ಮುರುಘಾಮಠಕ್ಕೆ ನೂತನ ಪೀಠಾಧ್ಯಕ್ಷ

Muruga Mutt
ಧಾರವಾಡ, ನ. 24: ವೀರಶೈವರ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಧಾರವಾಡ ಮುರುಘಾಮಠಕ್ಕೆ ನೂತನ ಶ್ರೀಗಳ ಪಟ್ಟಾಧಿಕಾರ ಸೋಮವಾರ ಅದ್ದೂರಿಯಿಂದ ನೆರವೇರಿತು. ಶ್ರೀಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಲ್ಬರ್ಗ ಜಿಲ್ಲೆ ಗುರುಮಿಠಕಲ್ಲಿನ ಶ್ರೀ ಶಾಂತವೀರ ಮುರುಘ ರಾಜೇಂದ್ರ ಶ್ರೀಗಳು ಬಸವಲಿಂಗ ಸ್ವಾಮಿ ಎಂಬ ನೂತನ ನಾಮದೊಂದಿಗೆ ಪೀಠ ಅಲಂಕರಿಸಿದರು.

ಚಿತ್ರದುರ್ಗ ಬೃಹನ್ಮಠದ ಮುರುಘಾಶರಣರು, ಗದಗ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು, ರಾವಂದೂರಿನ ಮೋಕ್ಷಪತಿ ಸ್ವಾಮಿಗಳು, ಅಥಣಿಯ ಚನ್ನಬಸವ ಸ್ವಾಮಿಗಳು, ಹೊಸದುರ್ಗದ ಶಿವಬಸವ ಸ್ವಾಮಿಗಳು, ವೇಮನ ಸ್ವಾಮಿಗಳು ಉಪಸ್ಥಿತರಿದ್ದರು. ನೂತನ ಶ್ರೀಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಿರೀಟ ಧಾರಣೆ, ಬಸವ ಜಲ ಸಿಂಪರಣೆ, ವಿಭೂತಿ-ಲಿಂಗ ಧಾರಣೆ, ಜೋಳಿಗೆ, ವಚನ-ಧರ್ಮ ಗ್ರಂಥ ಧಾರಣೆ ವಿಧಿವಿಧಾನ ಗಳು ನಡೆದವು.

(ಏಜೆನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+