ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ: ಜಿಲೇಟಿನ್ ಕಡ್ಡಿ ಸ್ಫೋಟಕ್ಕೆ 15 ಬಲಿ

|
Google Oneindia Kannada News

Explosion kills 15 in AP
ಗುಂಟೂರು, ನ.16: ಇಲ್ಲಿನ ದಾಚೇಪಲ್ಲಿ ಮಂಡಲಕ್ಕೆ ಸೇರಿದ ನಾರಾಯಣಪುರದ ಮನೆಯೊಂದರಲ್ಲಿ ನಡೆದ ಸ್ಫೋಟಕ್ಕೆ 15 ಜನ ಬಲಿಯಾಗಿದ್ದಾರೆ. ಸ್ಫೋಟದ ಭೀಕರತೆಗೆ ಸುತ್ತಮುತ್ತಲಿನ 10 ಮನೆಗಳು ನಾಶವಾಗಿದೆ.

ಘಟನೆ ನಡೆದ ಮನೆಯಲ್ಲಿ ಅಕ್ರಮವಾಗಿ ಜಿಲೇಟಿನ್ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯ ನಂತರ ಸ್ಥಳೀಯ ಪೊಲೀಸರು ತಿಳಿಸಿದರು. ಈ ಘಟನೆಯಿಂದ ಗಾಯಗೊಂಡ 20ಕ್ಕೂ ಅಧಿಕ ಜನರನ್ನು ಗುಂಟೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದರು.

ಕ್ವಾರಿ ಗುತ್ತಿಗೆಗಾರ ಕೋಟೇಶ್ವರ ರಾವ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಜಿಲೇಟಿನ್ ಕಡ್ಡಿಗಳನ್ನು ಗಣಿ ಮಾಲೀಕರಿಗೆ ಮಾರಲು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ತನಿಖೆ ಮುಂದುವರೆದಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X