ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಡ್ಡಿ ಅಕ್ರಮ ಗಣಿ ತನಿಖೆಗೆ ಸಮಿತಿ
ಮುಖ್ಯಮಂತ್ರಿ ಕೆ.ರೋಸಯ್ಯ ಅರಣ್ಯ ಮತ್ತು ಕೈಗಾರಿಕಾ ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಹತ್ತು ದಿನಗಳ ಒಳಗಾಗಿ ಈ ಸಮಿತಿ ತಮಗೆ ಪೂರ್ಣ ವರದಿ ಸಲ್ಲಿಸಬೇಕೆಂದೂ ಅವರು ಆದೇಶಿಸಿದ್ದಾರೆ. ಎರಡೂ ಸಮಿತಿಗಳು ತಲಾ ಮೂವರು ಸದಸ್ಯರನ್ನು ಒಳಗೊಂಡಿರುತ್ತವೆ.
ಈ ಮಧ್ಯೆ, ತೆಲುಗುದೇಶಂ ಪಕ್ಷವು ಕರ್ನಾಟಕ ಮತ್ತು ಆಂಧ್ರದಲ್ಲಿ ರಾಜಕಾರಣವನ್ನು ನಿಯಂತ್ರಿಸುತ್ತಿರುವ 'ಗಣಿ ಮಾಫಿಯ"ಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದೆ. ಗಣಿ ಮಾಫಿಯಾಗಳಿಗೆ ಮತ್ತಷ್ಟು ಗಣಿ ಗುತ್ತಿಗೆ ದೊರೆತರೆ ಅವು ಆರ್ಥಿಕವಾಗಿ ಮತ್ತಷ್ಟು ಬಲಶಾಲಿಯಾಗುತ್ತದೆ. ಖಾಸಗಿಯವರಿಗೆ ಗಣಿ ಗುತ್ತಿಗೆ ನೀಡುವ ಉದ್ದೇಶದಿಂದ ಸಿದ್ಧಪಡಿಸಿರುವ ಗಣಿ ನಿಯಂತ್ರಣ ಮಸೂದೆಯನ್ನು ಸಿಪಿಐ ವಿರೋಧಿಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧನ್ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
ಚಂದ್ರಬಾಬು ನಾಯ್ಡು andhra pradesh ಆಂಧ್ರ ಪ್ರದೇಶ ಜನಾರ್ದನ ರೆಡ್ಡಿ chandrababu naidu obalapuram mining company ಓಬಳಾಪುರಂ ಮೈನಿಂಗ್ ಕಂಪನಿ ರೋಸಯ್ಯ rosaiah janardhana reddy
Story first published: Wednesday, November 11, 2009, 15:57 [IST]