ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮ್ಮತ ಮೂಡದಿದ್ದರೆ ಚುನಾವಣೆ ಎದುರಿಸಿ: ಜೈಟ್ಲಿ

|
Google Oneindia Kannada News

Arun Jaitley
ಬೆಂಗಳೂರು, ಅ. 30 : ಬಿಜೆಪಿಯಲ್ಲಿ ಉಲ್ಬಣಿಸಿರುವ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಅರುಣ್ ಜೈಟ್ಲಿ ಗುರುವಾರ ತಡರಾತ್ರಿವರೆಗೂ ನಡೆಸಿದ ಸಂಧಾನ ಫಲಪ್ರದವಾಗಲಿಲ್ಲ. ರೆಡ್ಡಿ ಮತ್ತು ಯಡಿಯೂರಪ್ಪ ಬಣಗಳ ಬಿಗಿ ನಿಲುವಿನಿಂದ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ನಂಬರ್ ಗೇಮ್ ಆರಂಭವಾಗಿದ್ದು, ಉಭಯ ಬಣಗಳ ಶಕ್ತಿಕ್ಕೆ ಅಖಾಡ ಸಿದ್ಧವಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳಿಂದ ತೀವ್ರ ಬೇಸತ್ತಿರುವ ಅರುಣ್ ಜೈಟ್ಲಿ ಯಾವುದಾದರೂ ಒಂದು ಬಣ ಗುಂಪು ತ್ಯಾಗಕ್ಕೆ ಸಿದ್ಧವಾಗಬೇಕು. ಇಲ್ಲವಾದರೆ ಚುನಾವಣೆ ಅನಿವಾರ್ಯ ಎಂದು ಎರಡೂ ಕಡೆಯವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇಡೀ ದಿನ ಸಂಧಾನ ಸಭೆ ನೆಡೆಸಿದರೂ ಎರಡೂ ಗುಂಪಿನ ಮುಖಂಡರು ಪಟ್ಟು ಸಡಿಸಲಿಲ್ಲ. ಅದೇ ಬಿಗುವು ಮುಂದುವರಿದರೆ ಚುನಾವಣೆ ಒಂದೇ ಉಳಿದಿರುವ ಮಾರ್ಗ ಎಂದು ಜೈಟ್ಲಿ ಖಡಾಖಂಡಿತವಾಗಿ ಹೇಳಿದ್ದಾರೆ.

ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಗುರುವಾರ ರಾತ್ರಿಯೂ ಅರುಣ್ ಜೈಟ್ಲಿ ಅವರನ್ನು ಹೋಟೆಲ್ ನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು. ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X