ಅಕ್ಷರ ದಾಸೋಹ ಅಕ್ರಮ:ತನಿಖೆಗೆ ಸಮಿತಿ ರಚನೆ
ಬೆಂಗಳೂರು, ಅ.17: ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಇಸ್ಕಾನ್ ಸಂಸ್ಥೆಯು ಸರ್ಕಾರದ ಈ ಕಾರ್ಯಕ್ರಮಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ಪಡೆದುಕೊಂಡೂ, ಸರ್ಕಾರದ ಗಮನಕ್ಕೆ ಬಾರದ ರೀತಿಯಲ್ಲಿ ಅವ್ಯವಹಾರ, ಅನುದಾನದ ದುರುಪಯೋಗ ನಡೆಸಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ವಿಧಾನ ಸಭಾ ಸದಸ್ಯರಾದ ಎನ್ ಯೋಗೀಶ್ ಅವರ ಅಧ್ಯಕ್ಷತೆಯಲ್ಲಿ ಸದನ ಸಮಿತಿಯನ್ನು ಸಭಾಧ್ಯಕ್ಷರು ರಚಿಸಿದ್ದಾರೆ.
ಈ ಸಮಿತಿಯಲ್ಲಿ ವಿಧಾನಸಭಾ ಸದಸ್ಯರುಗಳಾದ ಅಪ್ಪಚ್ಚು ರಂಜನ್, ಬಿ.ಎನ್.ವಿಜಯಕುಮಾರ್, ಎಸ್.ಮುನಿರಾಜು, ನರಸಿಂಹ ನಾಯಕ್ (ರಾಜುಗೌಡ), ಎನ್.ಎಸ್.ನಂದೀಶ್ ರೆಡ್ಡಿ, ಡಿ.ಕೆ.ಶಿವಕುಮಾರ್, ಡಾ.ಹೆಚ್.ಸಿ.ಮಹದೇವಪ್ಪ, ಕೆ.ಎಂ.ಕೃಷ್ಣಮೂರ್ತಿ ಮತ್ತು ಸುನೀಲ್ ವಿ.ಹೆಗಡೆ ಸಮಿತಿಯ ಸದಸ್ಯರುಗಳಾಗಿದ್ದಾರೆ.
ಸಮಿತಿಯು ಮುಂದಿನ 3 ತಿಂಗಳ ಅವಧಿಯಲ್ಲಿ ಸಮಗ್ರ ತನಿಖೆ ನಡೆಸಿ ವರದಿಯನ್ನು ನೀಡಬೇಕೆಂದು ತಿಳಿಸಲಾಗಿದೆ.23.7.2009 ರಂದು ವಿಧಾನ ಸಭೆಯಲ್ಲಿ ಈ ವಿಚಾರ ಪ್ರಸ್ಥಾಪವಾಗಿದ್ದು ಸಭೆಯ ಅಭಿಪ್ರಾಯದಂತೆ ಸಭಾಧ್ಯಕ್ಷರು ಈ ತೀರ್ಮಾನ ಕೈಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)