ಸಿಎಂ ಕೃಪೆ: ಶಿಕಾರಿಪುರಕ್ಕೆ ಜಿಲ್ಲಾ ಸ್ಥಾನಮಾನ?

ಹಲವಾರು ದಿನಗಳಿಂದ ಹರಡಿದ್ದ ವದಂತಿಗೆ ಸಿಎಂ ಬಿಎಸ್ ವೈ ಅವರಪುತ್ರ ಬಿವೈ ರಾಘವೇಂದ್ರ ಅವರು ಬಹಿರಂಗವಾಗಿ ಸೂಚನೆ ನೀಡಿದ್ದಾರೆ.ಜಿಲ್ಲಾ ಕೇಂದ್ರವಾಗಲಿರುವ ಶಿಕಾರಿಪುರದಲ್ಲಿ ಹೆಚ್ಚಿನ ಕಾಮಗಾರಿಗಳು ನಡೆಯಲಿದೆ ಎಂದು ಸಮಾರಂಭವೊಂದರಲ್ಲಿ ರಾಘವೇಂದ್ರ ಹೇಳಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಡನೆ ರಾಘವೇಂದ್ರ ಅವರು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
ಜೆ.ಎಚ್ ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಕ್ಷೇತ್ರ ಚನ್ನಗಿರಿ ಒಳಗೊಂಡಂತೆ ದಾವಣಗೆರೆಯನ್ನು ಜಿಲ್ಲೆಯಾಗಿ ಘೋಷಿಸಿದ್ದರು. ಎಚ್ .ಡಿ ಕುಮಾರಸ್ವಾಮಿ ಅವರು ಸಿಎಂ ಆದಾಗ ರಾಮನಗರಕ್ಕೆ ಜಿಲ್ಲಾ ಕೇಂದ್ರದ ಗೌರವ ದೊರೆಯಿತು.ಈಗ ಯಡಿಯೂರಪ್ಪ ಅವರು ಕೂಡ ಇದೇ ಹಾದಿ ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ.ಯಾದಗಿರಿಯನ್ನು ಜಿಲ್ಲೆ ಎಂದು ಘೋಷಿಸಿದ ನಂತರ ಶಿಕಾರಿಪುರಕ್ಕೆ ಆ ಗೌರವ ದೊರೆತರೆ, 31 ನೇ ಜಿಲ್ಲೆಯಾಗಿ ಹೊರಹೊಮ್ಮಲಿದೆ
(ಏಜೆನ್ಸೀಸ್)











Click it and Unblock the Notifications