ಪ್ಯಾಂಥರ್ಸ್, ಗ್ಲೇಡಿಯೇಟರ್ಸ ತಂಡಕ್ಕೆ ಜಯ

ಪ್ಯಾಂಥರ್ಸ್ ಮತ್ತು ಶಾಮನೂರು ಡೈಮಂಡ್ಸ್ ತಂಡಗಳ ಪಂದ್ಯವನ್ನು ಮಳೆಯಿಂದ 17ಓವರ್ ಗಳಿಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ದಾವಣಗೆರೆ ತಂಡ 17 ಓವರ್ ಗಳಲ್ಲಿ 9ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪ್ಯಾಂಥರ್ಸ್ ತಂಡ 15.1 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮೂರು ವಿಕೆಟ್ ಪಡೆದ ಮಧುಸೂದನ್ ಪಂದ್ಯಪುರುಷ ಪ್ರಶಸ್ತಿಗೆ ಪಾತ್ರರಾದರು.
ಇನ್ನೊಂದು ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರಾವಿಡೆಂಟ್ ತಂಡ 20 ಓವರ್ ಗಳಲ್ಲಿ 9ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು. ಉತ್ತರವಾಗಿ ಮಲ್ನಾಡ್ ತಂಡ 17.2 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 109 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. 62 ರನ್ ಗಳಿಸಿದ ಕುನಾಲ್ ಕಪೂರ್ ಪಂದ್ಯಪುರುಷ ಪ್ರಶಸ್ತಿ ಗಳಿಸಿದರು.
ಇಂದಿನ ಪಂದ್ಯಗಳು: ಬೆಂಗಳೂರು ಬ್ರಿಗೇಡಿಯರ್ಸ್ Vs ದಾವಣಗೆರೆ ಶಾಮನೂರು ಡೈಮಂಡ್ಸ್ (ಸಮಯ 3.30ಕ್ಕೆ)
ಬೆಂಗಳೂರು ಪ್ರಾವಿಡೆಂಟ್ Vs ಮೈಸೂರು ಮಹಾರಾಜಾಸ್ (ಸಂಜೆ 7.15ಕ್ಕೆ)
ಸ್ಥಳ : ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
(ದಟ್ಸ್ ಕನ್ನಡ ಕ್ರೀಡಾ ವಾರ್ತೆ)











Click it and Unblock the Notifications