ದಿನಕರನ್ ವಜಾಕ್ಕೆ ವಕೀಲರ ಸಂಘದ ಆಗ್ರಹ

ಅಷ್ಟೇ ಅಲ್ಲದೇ, ವಕೀಲ ಸಮುದಾಯಕ್ಕೆ ಅವರು ಅನ್ಯಾಯ ಮಾಡಿರುವ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಅನ್ಯಾಯಕ್ಕೆ ಒಳಗಾಗಿದ್ದೇವೆ ಎನ್ನುವ ವಕೀಲರು ಲಿಖಿತ ರೂಪದಲ್ಲಿ ಆರೋಪಗಳ ಬಗ್ಗೆ ತಿಳಿಸುವಂತೆ ಸಂಘ ತಿಳಿಸಿದೆ. ಈ ಆರೋಪಗಳನ್ನು ಪಟ್ಟಿ ಮಾಡಿ, ಅದನ್ನು ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ, ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವ ನಿರ್ಣಯವನ್ನು ಕೂಡ ಇದೇ ಸಂದರ್ಭದಲ್ಲಿ ಕೈಗೊಳ್ಳಲಾಗಿದೆ.
ಅಕ್ರಮ ಆಸ್ತಿ ಗಳಿಕೆಯ ಆರೋಪಕ್ಕೆ ಒಳಗಾಗಿರುವ ದಿನಕರನ್ ಅವರ ವೃತ್ತಿ ಭವಿಷ್ಯದ ಬಗ್ಗೆ ನಿರ್ಧರಿಸಲು ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ನೇತೃತ್ವದ ನೇಮಕಾತಿ ಸಲಹಾ ಸಮಿತಿಯು ಶುಕ್ರವಾರ ಸಂಜೆ ಸಭೆ ಸೇರಲಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications