ಬೆಂಗಳೂರು : ಮೋರಿಯೊಳಗೆ ಬಿದ್ದ ಕಂದಮ್ಮ
ಬೆಂಗಳೂರು, ಸೆ. 16 : ಕಾಲುವೆಯಲ್ಲಿ ಕೊಚ್ಚಿ ಹೋದ ಕಂದಮ್ಮ ಅಭಿಷೇಕನ ದಾರುಣ ಅಂತ್ಯ ಇನ್ನೂ ಹಸಿರಿರುವಾಗಲೇ ನಗರದಲ್ಲಿ ಇನ್ನೊಂದು ಅಂತಹದೆ ಘಟನೆ ನಡೆದಿದ್ದು, ವಿಜಯ್ ಎಂಬ ಮಗು ಮೋರಿಯೊಳಗೆ ತೇಲಿ ಹೋದ ಘಟನೆ ಬನ್ನೇರುಘಟ್ಟ ರಸ್ತೆಯ ದೇವರಚಿಕ್ಕನಹಳ್ಳಿಯ ರಾಯಲ್ ರೆಸಿಡೆನ್ಸಿ ಬಳಿ ಇಂದು ಬೆಳಗ್ಗೆ ನಡೆದಿದೆ.
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದ ರಾಜಕಾಲುವೆ ಸೇರಿ ಚಿಕ್ಕಪುಟ್ಟ ಚರಂಡಿಗಳು ತುಂಬಿ ಹರಿಯತೊಡಗಿವೆ. ಇಂದು ಆಕಸ್ಮಿಕವಾಗಿ ಮೋರಿಯೊಳಗೆ ಬಿದ್ದ ಮಗು ವಿಜಯ್ ನಾಪತ್ತೆಯಾಗಿದೆ. ವಿಜಯ್ ಪತ್ತೆಗಾಗಿ ಅಗ್ನಿಶಾಮಕ ದಳ, ಬಿಬಿಎಂಪಿ ರಕ್ಷಣಾ ಸಿಬ್ಬಂದಿ ಮತ್ತು 10 ಜೆಸಿಬಿ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಬಿಬಿಎಂಪಿ ವಿಶೇಷ ಆಯುಕ್ತ ಮಹೇಶ್ವರರಾವ್, ಶಾಸಕ ಸತೀಶ್ ರೆಡ್ಡಿ, ವೈದ್ಯರು ಸ್ಥಳದಲ್ಲಿ ಮೊಕ್ಕಾಂ ಹೊಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications