ಉಡುಪಿ : ಅದಮಾರು ಶ್ರೀಗಳು ವಿಧಿವಶ
ಉಡುಪಿ,
ಸೆ. 15 : ಉಡುಪಿ ಅಷ್ಟಮಠಗಳಲ್ಲಿ ಒಂದಾದ ಅದಮಾರು ಮಠದ ಹಿರಿಯ ಯತಿಗಳಾದ ವಿಬುದೇಶ ತೀರ್ಥ ಸ್ವಾಮೀಜಿಗಳು ಇಂದು ನಸುಕಿನಲ್ಲಿ ಹರಿಪಾದ ಸೇರಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. 1928 ರಲ್ಲಿ ಜನಿಸಿದ ಸ್ವಾಮೀಜಿಗಳು 1945 ರಲ್ಲಿ ಸನ್ಯಾಸತ್ವದ ದೀಕ್ಷೆ ಪಡೆದಿದ್ದರು. id="toptextpromo">ಉಡುಪಿ
ಕೃಷ್ಣ ದೇವಾಲಯದ ಆವರಣದಲ್ಲಿರುವ ಬೃಂದಾವನದಲ್ಲಿ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಅವರ ಅಸಂಖ್ಯಾತರ ಸಂಖ್ಯೆಯಲ್ಲಿರುವ ಭಕ್ತರ ದರ್ಶನಕ್ಕಾಗಿ ಇಡಲಾಗಿದೆ. ಶ್ರೀಗಳ ಹುಟ್ಟೂರಾದ ಅದಮಾರಿನಲ್ಲಿ ಇಂದು 11.30 ಕ್ಕೆ ಮಾಧ್ವ ಸಂಪ್ರದಾಯದ ಪ್ರಕಾರ ಅಂತಿಮ ಸಂಸ್ಕಾರ ನಡೆಯಲಿದೆ. ಉಡುಪಿ, ಬೆಂಗಳೂರು, ದೆಹಲಿ ಮತ್ತು ಮುಂಬೈ ನಲ್ಲಿ ಹೆಸರಾಂತ 'ಪೂರ್ಣಪ್ರಜ್ಞ' ವಿದ್ಯಾಸಂಸ್ಥೆಯನ್ನು ಸ್ವಾಮೀಜಿಗಳು ನಡೆಸುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications